Advertisement

‘ಅಸಂಘಟಿತ ಕಾರ್ಮಿಕ ಕುಟುಂಬಗಳು ದೇಶದ ಮುಖ್ಯವಾಹಿನಿಗೆ ಬರಲಿ’

03:05 AM Jul 07, 2017 | Team Udayavani |

ವಿಟ್ಲ: ಅಸಂಘಟಿತ ಕಾರ್ಮಿಕ ಕುಟುಂಬಗಳು ದೇಶದ ಮುಖ್ಯವಾಹಿನಿಗೆ ಬರಬೇಕು. ಅಸಂಘಟಿತ ಕಾರ್ಮಿಕ ಮುಕ್ತ ಭಾರತ ನಿರ್ಮಾಣ ಮಾಡುವ ಪ್ರಯತ್ನವಾಗಬೇಕು ಎಂದು ಕಾರ್ಮಿಕ ಪ್ರಾದೇಶಿಕ ನಿರ್ದೇಶನಾಲಯದ ಕಾರ್ಮಿಕ ಶಿಕ್ಷಣಾಧಿಕಾರಿ ಸತೀಶ್‌ ಕುಮಾರ್‌ ಅವರು ಹೇಳಿದರು. ಭಾರತದ ಸರಕಾರದ ದತ್ತೋ ಪಂತ್‌ ಥೇಂಗಡಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಅಭಿವೃದ್ಧಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವತಿಯಿಂದ ಕೇಪು ಗ್ರಾ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ 2 ದಿನಗಳ ಅಸಂಘಟಿತ ಕಾರ್ಮಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Advertisement

ಗ್ರಾ.ಪಂ.ಅಧ್ಯಕ್ಷ ತಾರಾನಾಥ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಸದಸ್ಯೆ ಮಾಲತಿ, ಪಿಡಿಓ ನಳಿನಿ ಉಪಸ್ಥಿತರಿದ್ದರು. ಪರಿಶಿಷ್ಟ ಪಂಗಡದ ಅಸಂಘಟಿತ ಕಾರ್ಮಿಕರಿಗೆ ನಡೆದ ಸಂವಾದ ಕಾರ್ಯಕ್ರಮವನ್ನು ವಿಟ್ಲ ಶಿಶು ಯೋಜನೆ ಅಧಿಕಾರಿ ಸುಧಾ ಜೋಶಿ, ಕಲಾವಿದ ಮಂಜು ವಿಟ್ಲ ನಡೆಸಿದರು. ಶಿಕ್ಷಕಿ ಲಕ್ಷ್ಮೀ ಸ್ವಾಗತಿಸಿ, ಮೇಲ್ವಿಚಾರಕಿ ಲೋಲಾಕ್ಷಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next