Advertisement

ಮೂಳೂರಿನಲ್ಲಿ  ಅನಧಿಕೃತ  ಕಸಾಯಿಖಾನೆ ಕಾರ್ಯಾಚರಣೆ 

09:43 AM Oct 23, 2017 | Team Udayavani |

ಕಾಪು: ಮೂಳೂರಿನಲ್ಲಿ ಕಾರ್ಯಾಚರಿಸುತ್ತಿದ್ದ ಅನಧಿಕೃತ ಕಸಾಯಿಖಾನೆಗೆ ರವಿವಾರ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದು, ಅಕ್ರಮ ಗೋ ಹತ್ಯಾ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಮೂಳೂರಿನ ಅಬ್ದುಲ್‌ ಖಾದರ್‌ ಅವರ ಮನೆ ಪಕ್ಕದ ಶೆಡ್‌ನ‌ಲ್ಲಿ ಅಕ್ರಮ ಕಸಾಯಿಖಾನೆ ನಡೆಸುತಿದ್ದು ಕಾಪು ಎಸ್‌ಐ ನಿತ್ಯಾನಂದ ಗೌಡ ಅವರ ನೇತೃತ್ವದಲ್ಲಿ ಪೊಲೀಸರು ಧಾಳಿ ನಡೆಸಿದ್ದರು.

Advertisement

ಪೊಲೀಸ್‌ ಧಾಳಿಯ ವೇಳೆ ದನ ಕಡಿದು ಮಾಂಸ ಮಾಡುತ್ತಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ದನದ ದೇಹದ ಭಾಗ, ಚರ್ಮ ಮತ್ತು ಮಾಂಸ ಮಾಡಲು ಬಳಸುವ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿ ಅಕ್ರಮವಾಗಿ ಕಟ್ಟಿ ಹಾಕಲಾಗಿದ್ದ ಮೂರು ಕರುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ದನ ಕಳ್ಳತನ, ಪ್ರಾಣಿ ಹಿಂಸೆ ಮತ್ತು ಗೋ ಹತ್ಯೆ ಸಹಿತ ವಿವಿಧ ಕಾಲಂಗಳಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕಾಪು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಕರುಗಳನ್ನು ನೀಲಾವರ ಗೋಶಾಲೆಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next