Advertisement

ಸಾವಿನ ಸುದ್ದಿ ತಿಳಿಸದ ಅಧಿಕಾರಿ ಅಮಾನತು

11:16 PM Sep 08, 2019 | Team Udayavani |

ಗಂಗಾವತಿ: ಮಗಳು ಸತ್ತ ಸುದ್ದಿಯನ್ನು ಮುಚ್ಚಿಟ್ಟು ಕಂಡಕ್ಟರ್‌ನ್ನು ಡ್ಯೂಟಿಗೆ ಕಳುಹಿಸಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ಸಹಾಯಕ ಸಂಚಾರಿ ನಿರೀ ಕ್ಷಕಿ ಹೇಮಾವತಿ ಅವರನ್ನು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಫಯಾಜ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಳೆದ ಬುಧವಾರ ಸ್ಥಳೀಯ ಈಶಾನ್ಯ ಸಾರಿಗೆ ಸಂಸ್ಥೆಯ ಕಂಡಕ್ಟರ್‌ ಮಂಜುನಾಥ ಅವರ ಮಗಳು ಕವಿತಾ (11) ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮದಲ್ಲಿ ಟೈಫಾಯಿಡ್‌ನಿಂದ ಮೃತರಾಗಿದ್ದರು.

Advertisement

ಈ ವಿಷಯವನ್ನು ತಂದೆಗೆ ತಿಳಿಸುವಂತೆ ಮನೆಯವರು ದೂರವಾಣಿ ಮೂಲಕ ಮನವಿ ಮಾಡಿದರೂ ಹೇಮಾವತಿ ಅವರು ನಿರ್ಲಕ್ಷ್ಯ ಮಾಡಿ ಮಂಜುನಾಥ ಅವರನ್ನು ಗಂಗಾವತಿ-ಕೊಲ್ಹಾಪೂರ ಡ್ನೂಟಿಗೆ ಕಳುಹಿಸಿದ್ದರು. ಪ್ರಕರಣದ ತೀವ್ರತೆ ಅರಿತು ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಮಹಮದ್‌ ಫಯಾಜ್‌ ಅವರು ಸಂಸ್ಥೆಯ ಡಿಟಿಒ ಹಾಗೂ ಡಿಎಂಇ ಅವರನ್ನು ಗಂಗಾವತಿ ಡಿಪೋಗೆ ಕಳುಹಿಸಿ ಸಮಗ್ರ ವರದಿ ಪಡೆದು ಶನಿವಾರ ಸಂಜೆ ಎಟಿಐ ಹೇಮಾವತಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಈಶಾನ್ಯ ಸಾರಿಗೆ ಸಂಸ್ಥೆಯ ನೌಕರರು ಎಐಸಿಟಿಯು ಹಾಗೂ ಸಿಐಟಿಯು ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಸಾರಿಗೆ ಬಸ್‌ಗಳಲ್ಲಿ ಮೊಬೈಲ್‌ ನಿಷೇಧ ಮಾಡಿರುವ ಕಾರಣ ದುರ್ಘ‌ಟನೆ ಜರುಗಿದೆ. ಕೂಡಲೇ ಆದೇಶ ವಾಪಸ್‌ ಪಡೆಯುವಂತೆ ಪ್ರತಿಭಟನೆ ವೇಳೆ ಒತ್ತಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next