Advertisement
ಪರಿಶಿಷ್ಟ ಜಾತಿ, ಪಂಗಡದವರು ಉದ್ಯಮಿಗಳಾಗಿ ರೂಪುಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯು “ಉನ್ನತಿ’ ಯೋಜನೆಯನ್ನು ರೂಪಿಸಿದೆ. ಪರಿಶಿಷ್ಟ ಜಾತಿ, ಪಂಗಡದವರ ಮಾಲೀಕತ್ವದ ಸ್ಟಾರ್ಟ್ಅಪ್ಗ್ಳಿಗೆ ನಾನಾ ಹಂತದಲ್ಲಿ ಪರಿಶೀಲನೆಗೆ ಒಳಪಡಿಸಿ ಆಯ್ಕೆಯಾದರೆ ಗರಿಷ್ಠ 50 ಲಕ್ಷ ರೂ.ವರೆಗೆ ಅನುದಾನ ನೀಡಲಿದೆ.
Related Articles
Advertisement
ಮಾರ್ಗದರ್ಶನ ಅಗತ್ಯ: ಅನುದಾನವನ್ನು ಏಕಕಾಲಕ್ಕೆ ನೀಡುವ ಬದಲಿಗೆ ಬೆಳವಣಿಗೆ, ವಿಸ್ತರಣೆಗೆ ಅನುಗುಣವಾಗಿ ಹಂತ ಹಂತವಾಗಿ ಬಿಡುಗಡೆ ಮಾಡುವುದು ಸೂಕ್ತ ಎನಿಸುತ್ತದೆ. ಹಾಗೆಯೇ ಅನುದಾನ ಬಳಕೆಗೆ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆ (ಮೆಂಟರಿಂಗ್- ಮಾನಿಟರಿಂಗ್) ಬಹಳ ಮುಖ್ಯ. ಸಂಶೋಧನೆ ಮತ್ತು ಅಭಿವೃದ್ಧಿ ಮಾತ್ರವಲ್ಲದೆ, ಮಾರುಕಟ್ಟೆ, ವ್ಯವಹಾರ ವೃದ್ಧಿಯತ್ತ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.
ವಿಮಾ ವಲಯದ ಉದ್ಯಮಿ ಮಲ್ಲೇಶ್ರೆಡ್ಡಿ ಮಾತನಾಡಿ, ಯುವ ಉದ್ಯಮಿಗಳು, ನವೋದ್ಯಮ ಆರಂಭಿಸಿರುವವರು, ದೌರ್ಬಲ್ಯಗಳು ಹಾಗೂ ಅಪಾಯಗಳನ್ನು ಎದುರಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು ಮುಖ್ಯ. ಅನುದಾನ ದುರ್ಬಳಕೆಯಾದರೆ ಆ ಮೊತ್ತವನ್ನು ಫಲಾನುಭವಿಗಳೇ ಇಲಾಖೆಗೆ ಭರಿಸುವ ಅಂಶವನ್ನು ಸೇರ್ಪಡೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಫಲಾನುಭವಿಗಳ ಮೇಲೆ ಹೊಣೆಗಾರಿಕೆ ಹೆಚ್ಚು: ಫಲಾನುಭವಿಗಳು ಇಲಾಖೆಯ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರಗತಿ ಸಾಧಿಸಿದರೆ ಇತರಿಗೆ ಮಾದರಿಯಾಗುವ ಜತೆಗೆ ಸ್ಫೂರ್ತಿಯಾಗಲಿದೆ. ಹಾಗಾಗಿ ಪ್ರಥಮ ಬಾರಿಗೆ ಅನುದಾನ ಪಡೆಯುವವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಒಂದೊಮ್ಮೆ ಪ್ರಥಮ ಬಾರಿಗೆ ಪಡೆದವರು ಹಣ ದುರ್ಬಳಕೆ ಮಾಡಿಕೊಂಡರೆ ಯೋಜನೆಯ ಅನುಷ್ಠಾನವೇ ಕಷ್ಟವಾಗಿ ಅನುದಾನದ ಅಗತ್ಯವಿರುವವರು, ಅರ್ಹರು ಆರ್ಥಿಕ ನೆರವಿನಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರೊಬ್ಬರು ಹೇಳಿದರು.
ನಿರೀಕ್ಷೆಗೂ ಮೀರಿ 307 ಸ್ಟಾರ್ಟ್ಅಪ್ಗ್ಳು ಅರ್ಜಿ ಸಲ್ಲಿಸಿದ್ದು, ಉದ್ಯಮಿಗಳಾಗುವ ಉತ್ಸಾಹವನ್ನು ತೋರಿಸುತ್ತದೆ. ಆ ಹಿನ್ನೆಲೆಯಲ್ಲಿ ಯೋಜನೆಯಡಿ 20 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಲಾಗಿದ್ದು, ಇದರ ಯಶಸ್ಸನ್ನು ಆಧರಿಸಿ ಮುಂದಿನ ವರ್ಷ ಅನುದಾನ ಪ್ರಮಾಣ ಹೆಚ್ಚಿಸುತ್ತೇವೆ.– ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ “ಉನ್ನತಿ’ ಯೋಜನೆಯಡಿ 307ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, 188 ಸ್ಟಾರ್ಟ್ಅಪ್ಗ್ಳು ಎರಡನೇ ಹಂತಕ್ಕೆ ಆಯ್ಕೆಯಾಗಿದ್ದವು. ಈ ಪೈಕಿ ಸುಮಾರು 150 ಸ್ಟಾರ್ಟ್ಅಪ್ಗ್ಳು ಪ್ರಾತ್ಯಕ್ಷಿಕೆ ನೀಡಿವೆ.
– ಶ್ರೀನಿವಾಸುಲು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ಕೀರ್ತಿಪ್ರಸಾದ್