Advertisement

ಉನ್ನಾವೊ ಘಟನೆ; ಭಗವಾನ್ ರಾಮನಿಂದಲೂ ಶೇ.100ರಷ್ಟು ಅಪರಾಧ ಮುಕ್ತ ರಾಜ್ಯ ಮಾಡಲು ಆಗಲ್ಲ!

09:48 AM Dec 06, 2019 | Nagendra Trasi |

ಲಕ್ನೋ: ಒಂದು ವೇಳೆ ಭಗವಾನ್ ರಾಮ ಇದ್ದರೂ ಕೂಡಾ ಇಂದಿನ ಪರಿಸ್ಥಿತಿಯಲ್ಲಿ ರಾಜ್ಯವನ್ನು ಶೇ.100ರಷ್ಟು ಅಪರಾಧ ಮುಕ್ತ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕ ರವೀಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಉನ್ನಾವೊದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತೆಯ ಮೇಲೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆರೋಪಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಬಳಿಕ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಯೋಗಿ ಆದಿತ್ಯನಾಥ್ ಆಡಳಿತಾವಧಿಯಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಯಾಗಿದೆ. ಅಲ್ಲದೇ ಆರೋಪಿಗಳಿಗೆ ರಾಜಕೀಯ ಆಶ್ರಯ ಕೂಡಾ ಸಿಗುತ್ತಿಲ್ಲ. ಇನ್ನು ಉನ್ನಾವೋ ಪ್ರಕರಣದಲ್ಲಿ ಹೇಳುವುದಾದರೆ, ಒಂದು ವೇಳೆ ಭಗವಾನ್ ರಾಮ ಇದ್ದರೂ ಕೂಡಾ ಈ ಸಮಾಜವನ್ನು ಶೇ.100ರಷ್ಟು ಅಪರಾಧ ಮುಕ್ತ ಮಾಡಲು ಸಾಧ್ಯವಿಲ್ಲ. ಆದರೆ ಒಂದು ವೇಳೆ ಅಪರಾಧ ಕೃತ್ಯ ಎಸಗಿದ್ದೇ ಹೌದಾದಲ್ಲಿ, ಆರೋಪಿಗಳು ಜೈಲು ಸೇರುವುದು ಖಚಿತ ಎಂದು ತಿಳಿಸಿದರು.

ಉತ್ತರಪ್ರದೇಶದಲ್ಲಿ ಪ್ರಸ್ತುತ ವಾತಾವರಣ ಯಾವುದೇ ಹೆದರಿಕೆ ಇಲ್ಲದೆ ಇರಬಹುದಾಗಿದೆ ಎಂದು ಈ ಸಂದರ್ಭದಲ್ಲಿ ಶಾಸಕ ಸಿಂಗ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next