Advertisement

ಅಪರಿಚಿತ ವಾಹನ ಢಿಕ್ಕಿ: ಪಾದಚಾರಿ ಸಾವು

06:30 AM Feb 10, 2018 | |

ಅಜೆಕಾರು: ಅಜೆಕಾರಿನ ನೂಜಿಯಲ್ಲಿ  ಅಪರಿಚಿತ ವಾಹನ ಢಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ.

Advertisement

ಅಜೆಕಾರು ಗುಡ್ಡೆಯಂಗಡಿ ತೀಥೊìಟ್ಟು ಸೇತುವೆ ಬಳಿಯ ನಿವಾಸಿ ಕರುಣಾಕರ ಹೆಗ್ಡೆ (56)  ಎಂದಿನಂತೆ  ಪೇಟೆಯಲ್ಲಿರುವ ಹೊಟೇಲೊಂದರ ಅಡುಗೆ ಕೆಲಸಕ್ಕೆಂದು   ಬರುತ್ತಿದ್ದಾಗ  ಅಪಘಾತ ಸಂಭವಿಸಿದೆ.

ರಸ್ತೆಯಲ್ಲಿ ಬಿದ್ದಿದ್ದ ಇವರನ್ನು  ಸ್ಥಳೀಯರು  ಕಾರ್ಕಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು,   ಬಳಿಕ ಮಣಿಪಾಲಕ್ಕೆ ಕೊಂಡೊಯ್ಯು ತ್ತಿದ್ದಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ.   ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next