Advertisement

ಈದ್ ಹಬ್ಬದ ದಿನವೇ ನೆತ್ತರು ಹರಿಸಿದ ದುಷ್ಕರ್ಮಿಗಳು: ಮಟನ್ ವ್ಯಾಪಾರಿಯನ್ನು ಕೊಚ್ಚಿ ಕೊಲೆ

12:15 PM Jul 21, 2021 | Team Udayavani |

ಯಾದಗಿರಿ: ಶಾಹಪುರ ತಾಲೂಕಿನ ಗೂಗಿ (ಕೆ) ಗ್ರಾಮದಲ್ಲಿ ಈದ್ ಹಬ್ಬದ ದಿನವೇ ದುಷ್ಕರ್ಮಿಗಳು ನೆತ್ತರು ಹರಿಸಿದ್ದಾರೆ.

Advertisement

ಬುಧವಾರ ಬೆಳಗಿನ ಜಾವ ಮೋಟಾರ್ ಬೈಕ್ ನಲ್ಲಿ ಬರುತ್ತಿದ್ದ ಖಾಸಿಂಸಾಬ್ ಚೌದ್ರಿ (50 ವ) ಎಂಬಾತನನ್ನು ತಡೆದು ಆತನನ್ನು ಕೆಳಗೆ ಬೀಳಿಸಿ ತಲೆಗೆ ಹರಿತವಾದ ಮಚ್ಚಿನಿಂದ ಹೊಡೆದು ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ನಡೆದಿದೆ.

ಇದನ್ನೂ ಓದಿ:ಹಿಂಸಾಚಾರದ ವಿರುದ್ಧ ನಾಳೆ ರಾಜ್ ಘಾಟ್ ನಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಪ್ರತಿಭಟನೆ : ಘೋಷ್

ಮೃತ ವ್ಯಕ್ತಿ ಮಟನ್ ವ್ಯಾಪಾರ ಮಾಡುತ್ತ ಜೀವನ ನಡೆಸುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದ್ದು, ಕೊಲೆಗಡುಕರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next