Advertisement

ಸಾರ್ವತ್ರಿಕ ರಜಾ ದಿನ ಪ್ರಕಟ

06:20 AM Nov 20, 2018 | |

ಬೆಂಗಳೂರು: ರಾಜ್ಯ ಸರ್ಕಾರ 2019 ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳನ್ನು ಪ್ರಕಟಿಸಿದ್ದು , 21 ದಿನ ಸಾರ್ವತ್ರಿಕ ರಜೆ, 19 ನಿರ್ಬಂಧಿತ  ರಜೆ ಹಾಗೂ ಎಲ್ಲ ಭಾನುವಾರ, ಎರಡನೇ ಶನಿವಾರ  ರಜೆ ಎಂದು ಘೋಷಿಸಿದೆ. ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಜೆ ಪಟ್ಟಿಗೆ ಅನುಮೋದನೆ ನೀಡಲಾಗಿದೆ.

Advertisement

ಸಾರ್ವತ್ರಿಕ ರಜೆ
ಜನವರಿ-15 (ಸಂಕ್ರಾಂತಿ), ಜನವರಿ 26 (ಗಣರಾಜ್ಯೋತ್ಸವ), ಮಾರ್ಚ್‌ -4 (ಮಹಾಶಿವರಾತ್ರಿ), ಏಪ್ರಿಲ್‌-4 (ಯುಗಾದಿ), ಏಪ್ರಿಲ್‌ -17 (ಮಹಾವೀರ ಜಯಂತಿ) ಏಪ್ರಿಲ್‌-19 (ಗುಡ್‌ ಫ್ರೈಡೆ),  ಮೇ-1 (ಕಾರ್ಮಿಕರ ದಿನಾಚರಣೆ), ಮೇ -7 (ಬಸವ ಜ¿ಂತಿ/ಅಕ್ಷಯ ತೃತೀಯ), ಜೂನ್‌-5 ( ರಂಜಾನ್‌), ಆಗಸ್ಟ್‌-8 (ಬಕ್ರೀದ್‌),  ಆಗಸ್ಟ್‌-16 (ಸ್ವಾತಂತ್ರ್ಯ ದಿನಾಚರಣೆ),  ಸೆಪ್ಟೆಂಬರ್‌-1 (ವಿನಾಯಕ ವ್ರತ),  ಸೆಪ್ಟೆಂಬರ್‌ -10 (ಮೊಹರಂ ಕಡೇ ದಿನ),  ಸೆಪ್ಟೆಂಬರ್‌-28 (ಮಹಾಲಯ ಆಮಾವಾಸ್ಯೆ).  ಅಕ್ಟೋಬರ್‌-2 (ಗಾಂಧಿ ಜಯಂತಿ), ಅಕ್ಟೋಬರ್‌-7(ಮಹಾನವಮಿ ಆಯುಧ ಪೂಜೆ),  ಅಕ್ಟೋಬರ್‌-8 (ವಿಜಯದಶಮಿ), ಅಕ್ಟೋಬರ್‌ -29( ಬಲಿಪಾಡ್ಯಮಿ, ದೀಪಾವಳಿ),  ನವೆಂಬರ್‌-1 (ಕನ್ನಡ ರಾಜ್ಯೊತ್ಸವ), ನವೆಂಬರ್‌-15 (ಕನಕದಾಸರ ಜಯಂತಿ), ಡಿಸೆಂಬರ್‌ -25 (ಕ್ರಿಸ್‌ಮಸ್‌)

( ಈ ಪಟ್ಟಿಯಲ್ಲಿ ರಜಾ ದಿನ ಬರುವ ಅಂಬೇಡ್ಕರ ಜಯಂತಿ ಏಪ್ರಿಲ್‌-14, ಮಹರ್ಷಿ ವಾಲ್ಮೀಕಿ ಜಯಂತಿ – ಅಕ್ಟೋಬರ್‌ -13, ನರಕ ಚತುರ್ದಶಿ – ಅಕ್ಟೋಬರ್‌ 27, ಮತ್ತು  ಈದ್‌ ಮೀಲಾದ್‌ -ನವೆಂಬರ್‌ 10 ರಜಾ ದಿನ ಒಳಗೊಂಡಿರುವುದಿಲ್ಲ)

ನಿರ್ಬಂಧಿತ ರಜೆ
ಜನವರಿ-1 (ನೂತನ ವರ್ಷ), ಫೆಬ್ರವರಿ -14 (ಮಾಧ್ವ ನವಮಿ), ಮಾರ್ಚ್‌-20 (ಹೋಳಿ),  ಏಪ್ರಿಲ್‌-10 (ದೇವರ ದಾಸಿಮಯ್ಯ ಜಯಂತಿ) ಏಪ್ರಿಲ್‌-20(ಶಬೆ ಬರಾತ್‌), ಮೇ-9(ಶಂಕರ ಜಯಂತಿ), ಮೇ-18(ಬುದ್ಧ ಪೂರ್ಣಿಮಾ),  ಮೇ-31( ಜಮಾತ್‌ ಉಲ್‌ ವಿದಾ),  ಜೂನ್‌-1(ಶಬೆ ಕದರ್‌),  ಆಗಸ್ಟ್‌-9(ವರಮಹಾಲಕ್ಷ್ಮಿ),  ಆಗಸ್ಟ್‌-23( ಕೃಷ್ಣ  ಜನ್ಮಾಷ್ಠಮಿ),  ಸೆಪ್ಟೆಂಬರ್‌-11( ಓಣಂ), ಸೆಪ್ಟೆಂಬರ್‌-12 (ಅನಂತ ಪದ್ಮನಾಭ ವ್ರತ), ಸೆಪ್ಟೆಂಬರ್‌-13 (ನಾರಾಯಣ ಗುರು ಜಯಂತಿ), ಸೆಪ್ಟೆಂಬರ್‌-17 (ವಿಶ್ವಕರ್ಮ ಜಯಂತಿ),  ಅಕ್ಟೋಬರ್‌-18 (ತುಲಾ ಸಂಕ್ರಮಣ) ನವೆಂಬರ್‌-12 (ಗುರುನಾನಕ್‌ ಜಯಂತಿ), ಡಿಸೆಂಬರ್‌-12 (ಹುತ್ತರಿ ಹಬ್ಬ), ಡಿಸೆಂಬರ್‌-24 (ಕ್ರಿಸ್‌ಮಸ್‌ ಪ್ರಯುಕ್ತ)

( ಈ ಪಟ್ಟಿಯಲ್ಲಿ ಬರುವ  ರಾಮನವಮಿ- ಏಪ್ರಿಲ್‌ 13,  ಸೌರಮಾನ ಯುಗಾದಿ -ಏಪ್ರಿಲ್‌ 14,  ಸ್ವರ್ಣ ಗೌರಿ ವ್ರತ -ಸೆಪ್ಟೆಂಬರ್‌ 2 ರಜಾದಿನಗಳು ಸೇರಿಲ್ಲ)

Advertisement

ರಾಜ್ಯ ಸರ್ಕಾರಿ ನೌಕರರು ನಾಲ್ಕನೇ ಶನಿವಾರವೂ ರಜೆ ನೀಡುವ ಬೇಡಿಕೆ ಇಟ್ಟಿರುವುದರಿಂದ  ಈ ಕುರಿತು ಸಾಧಕ-ಬಾಧಕ ಬಗ್ಗೆ ಚರ್ಚಿಸಿ ವರದಿ ನೀಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

ಈಗಾಗಲೇ ಸರ್ಕಾರಿ ನೌಕರರ ಒಟ್ಟಾರೆ ರಜೆ 100 ದಿನ ದಾಟಿದ್ದು, ಸಾರ್ವಜನಿಕ ಕೆಲಸ-ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ.ಹೀಗಾಗಿ, ಹೆಚ್ಚುವರಿ ರಜೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next