Advertisement
ಕೇಂದ್ರ ಸರಕಾರ ಹಿಂದೆ ಹಲವು ಬಾರಿ ಅಂಥ ನೆರವನ್ನು ಟ್ರಂಪ್ ನೀಡಲು ಮುಂದಾಗಿದ್ದರೂ ಅದನ್ನು ಒಪ್ಪಿಕೊಂಡಿರಲಿಲ್ಲ ಮತ್ತು ದ್ವಿಪಕ್ಷೀಯ ವಿಚಾರವಾದ್ದರಿಂದ ಎರಡೂ ರಾಷ್ಟ್ರಗಳೇ ಅವು ಗಳನ್ನು ಬಗೆಹರಿಸಿಕೊಳ್ಳುವುದಾಗಿ ಹೇಳಿತ್ತು. ಪಾಕ್ ಪ್ರಧಾನಿ ಜತೆಗೆ ವೈಯಕ್ತಿಕ ಭೇಟಿ ನಡೆಸುವುದಕ್ಕೆ ಮುನ್ನ ಇಬ್ಬರು ನಾಯಕರು ಸುದ್ದಿಗೋಷ್ಠಿ ನಡೆಸಿದರು.
‘ನಮ್ಮ ಮತ್ತು ಭಾರತದ ನಡುವಿನ ಬಾಂಧವ್ಯ ಪಾಕಿಸ್ಥಾನಕ್ಕೆ ಪ್ರಮುಖ ವಿಚಾರವಾಗಿದೆ. ಅಮೆರಿಕ ಈ ಬಗ್ಗೆ ನೆರವು ನೀಡಲಿದೆ’ ಎಂದು ಇಮ್ರಾನ್ ಖಾನ್ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೂರನೆಯವರು ಬೇಡ: ಕೇಂದ್ರ
ಕಾಶ್ಮೀರ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನವನ್ನು, ಕೇಂದ್ರ ಸರಕಾರ ಸ್ಪಷ್ಟವಾಗಿ ತಿರಸ್ಕರಿಸಿದೆ. ಕಾಶ್ಮೀರ ವಿಚಾರದಲ್ಲಿ ಮೂರನೇ ವ್ಯಕ್ತಿಯ ಪ್ರವೇಶಕ್ಕೆ ಆಸ್ಪದವೇ ಇಲ್ಲ ಎಂದು ಖಂಡತುಂಡವಾಗಿ ಹೇಳಿದೆ. ಕಳೆದ 5 ತಿಂಗಳಲ್ಲಿ ನಾಲ್ಕನೇ ಬಾರಿಗೆ ಅವರು ಹೀಗೆ ಹೇಳುತ್ತಿರುವುದು ಗಮನಾರ್ಹ. ವಿಶೇಷವೆಂದರೆ ಅಷ್ಟೂ ಬಾರಿ ಭಾರತ ಟ್ರಂಪ್ ಮಾತಿಗೆ ತಿರಸ್ಕಾರ ಸೂಚಿಸಿದೆ.
Related Articles
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆ. 24, 25ರಂದು ತಮ್ಮ ಮೊತ್ತ ಮೊದಲ ಭಾರತ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಅಮೆರಿಕದ ವಿದೇಶಾಂಗ ಖಾತೆ ಸಹಾಯಕ ಸಚಿವೆ ಅಲಿಸ್ ವೆಲ್ಸ್ ಕಳೆದ ವಾರ ಹೊಸದಿಲ್ಲಿಗೆ ಭೇಟಿ ನೀಡಿದ್ದರು.
Advertisement
ಹ್ಯೂಸ್ಟನ್ನಲ್ಲಿ ನಡೆದಿದ್ದ ‘ಹೌಡಿ ಮೋದಿ’ ಕಾರ್ಯ ಕ್ರಮದಂತೆಯೇ ಅಹಮದಾಬಾದ್ನಲ್ಲಿ ಟ್ರಂಪ್ಗಾಗಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ಮಾತುಕತೆ – ಸಿದ್ಧತೆಗಳು ನಡೆಯುತ್ತಿವೆ. ಈ ಭೇಟಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಕೇಂದ್ರ ಸರಕಾರದ ನಿರ್ಧಾರಕ್ಕೆ ಸಮರ್ಥನೆ ದೊರೆತಂತಾಗುತ್ತದೆ ಎಂಬ ವಿಶ್ಲೇಷಣೆ ನಡೆದಿದೆ.