Advertisement

ತಿಗಡೊಳ್ಳಿ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ

04:42 PM Feb 10, 2020 | Suhan S |

ಚನ್ನಮ್ಮ ಕಿತ್ತೂರು: ತಿಗಡೊಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ (ನಂ-1) ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.

Advertisement

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಶಾಸಕ ಮಹಾಂತೇಶ ದೊಡಗೌಡರ ಅವರ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೋಪಾಲ ಹುಕ್ಕೇರಿ ಅಧ್ಯಕ್ಷರಾಗಿ ಹಾಗೂ ಲಲಿತಾ ಜಾಯ್ಕನವರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು. ಒಟ್ಟು 10 ಬಿಜೆಪಿ ಬೆಂಬಲಿತ ಸದಸ್ಯರಾದ ಚನಬಸಪ್ಪ ಮಲಶೆಟ್ಟಿ, ಅಶೋಕ ಕಳಸನ್ನವರ, ಮಹಾದೇವ ಹತ್ತಿ, ಕಸ್ತೂರಿ ಸಂಬೋಜಿ, ಕಲ್ಲಪ್ಪ ಹಂಚಿನಮನಿ, ಗುರುಪಾದಪ್ಪ ಉಪ್ಪಿನ, ಭೀಮಪ್ಪ ಕೊಲಕಾರ ಹಾಗೂ ವಿಠಲ ಪತ್ತಾರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಶಾಸಕ ಮಹಾಂತೇಶ ದೊಡಗೌಡರ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಸನ್ಮಾನಿಸಿದರು. ಈ ವೇಳೆ ಬಿಜೆಪಿ ಬ್ಲಾಕ್‌ ಅಧ್ಯಕ್ಷ ಬಸವರಾಜ ಪರವಣ್ಣವರ, ಉಳವಪ್ಪ ಉಳ್ಳೇಗಡ್ಡಿ, ಬಸವರಾಜ ಮಲಶೆಟ್ಟಿ, ರಾಜು ಕಡೋಳ್ಳಿ, ಬಸವರಾಜ ಉಪ್ಪಿನ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next