Advertisement

ಪೂರ್ಣಗೊಳ್ಳದ ಕೆರಾಡಿ –ವಂಡ್ಸೆ ಸಂಪರ್ಕ ರಸ್ತೆ

09:59 AM Oct 22, 2019 | sudhir |

ವಂಡ್ಸೆ: ಕೆರಾಡಿ ಮಾರ್ಗವಾಗಿ ಬೆಳ್ಳಾಲ, ನಂದೊಳ್ಳಿ, ನ್ಯಾಗಳಮನೆ, ಹಿಜಾಣ, ವಂಡ್ಸೆ ಮೂಲಕ ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ, ಶಾಲಾ – ಮಕ್ಕಳ ಅನುಕೂಲಕ್ಕಾಗಿ ಇದ್ದ ಬಸ್‌ ಸಂಚಾರ ಸ್ಥಗಿತಗೊಂಡಿದೆ.

Advertisement

ಪ್ರತಿದಿನ ಈ ಮಾರ್ಗದಲ್ಲಿ ಸುಮಾರು 50ರಿಂದ 60 ಮಕ್ಕಳು ಬೇರೆ – ಬೇರೆ ಶಾಲಾ – ಕಾಲೇಜುಗಳಿಗೆ ಹೋಗುತ್ತಾರೆ. ಆದರೆ ಇಷ್ಟು ದಿನಗಳ ಕಾಲ ಬಸ್‌ ಸಮಸ್ಯೆ ಎದುರಾಗಿತ್ತು. ಈಗ ಬಸ್‌ ವ್ಯವಸ್ಥೆ ಇದ್ದರೂ ಕೂಡ ರಸ್ತೆ ಕಾಮಗಾರಿ ವಿಳಂಬ ಮಾಡುತ್ತಿರುವ ಕಾರಣದಿಂದ ಬಸ್‌ ಸಂಚಾರ ಸ್ಥಗಿತಗೊಂಡು ವಿದ್ಯಾರ್ಥಿಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.

4 ಕಿ.ಮೀ. ಕಾಲ್ನಡಿಗೆ
ಹತ್ತಿರದಲ್ಲೇ ಇದ್ದ ರಸ್ತೆಯ ಸಂಚಾರ ಕಡಿತಗೊಂಡ ಕಾರಣ ವಿದ್ಯಾರ್ಥಿಗಳು ಪ್ರತಿ ದಿನ ಬೆಳಗ್ಗೆ ಸುಮಾರು 4 ಕಿ.ಮೀ. ದೂರದವರೆಗೆ ಮಾರಣಕಟ್ಟೆ ಮಾರ್ಗವಾಗಿ ತೆರಳುವ ಬಸ್‌ಗೆ ನಡೆದುಕೊಂಡೇ ಹೋಗಬೇಕಾಗಿದೆ.

ಶೀಘ್ರ ಪೂರ್ಣಕ್ಕೆ ಆಗ್ರಹ
ಈ ಬಗ್ಗೆ ಸ್ಥಳೀಯ ನಾಯಕರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಸ್‌ ಸಂಚಾರ ಶೀಘ್ರವೇ ಆರಂಭಿಸಲು, ರಸ್ತೆಯ ಕಾಮಗಾರಿ ಪೂರ್ಣಗೊಳಿಸಲು ಕ್ಷೇತ್ರದ ಶಾಸಕರು ಒತ್ತಾಯಿಸಬೇಕು ಎಂದು ಈ ಭಾಗದ ಹತ್ತಾರು ಮಂದಿ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next