Advertisement

ನಕ್ಸಲ್‌ ಭೂಗತ ಜಾಲ, ಐವರು ಮಾಸ್ಟರ್‌ ಮೈಂಡ್‌ ಪತ್ತೆ : ಗುಪ್ತಚರ ವರದಿ

11:14 AM Aug 30, 2018 | udayavani editorial |

ಹೊಸದಿಲ್ಲಿ : ನಕ್ಸಲರ ಭೂಗತ ಜಾಲವನ್ನು ಮತ್ತು ದೇಶದ ವಿವಿಧ ನಗರಗಳಲ್ಲಿ ಕಾರ್ಯಾಚರಿಸುತ್ತಿರುವ  ಅದರ ಐವರು ಮಾಸ್ಟರ್‌ ಮೈಂಡ್‌ಗಳನ್ನು ಗುಪ್ತಚರ ದಳ ಗುರುತಿಸಿರುವ ಮಹತ್ವದ ಬೆಳವಣಿಗೆ ವರದಿಯಾಗಿದೆ. 

Advertisement

ನಿಷೇಧಿತ ಸಿಪಿಎಂ ನಕ್ಸಲರ ದೇಶಾದ್ಯಂತದ ಭೂಗತ ಜಾಲದ ಬಗ್ಗೆ ಕೇಂದ್ರ ಸರಕಾರಕ್ಕೆ ಗುಪ್ತಚರ ದಳ ವಿಸ್ತೃತ ವರದಿಯನ್ನು ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

ನಕ್ಸಲ್‌ ಭೂಗತ ಜಾಲ ದೇಶಾದ್ಯಂತದ ವಿವಿಧ ನಗರಗಳಲ್ಲಿ ಇರುವುದನ್ನು ಮತ್ತು ಅದರ ಐವರು ಮಾಸ್ಟರ್‌ ಮೈಂಡ್‌ಗಳು ದೀರ್ಘ‌ಕಾಲದಿಂದ  ಕಾರ್ಯಾಚರಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಗುಪ್ತಚರ ದಳ ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿರುವ ವರದಿ ಹೇಳಿದೆ.

ಗೃಹ ಸಚಿವಾಲಯಕ್ಕೆ ಗುಪ್ತಚರ ದಳ ಸಲ್ಲಿಸಿರುವ ವರದಿಯಲ್ಲಿ ನಾಗ್ಪುರದ ಓರ್ವ ಪ್ರೊಫೆಸರ್‌, ಓರ್ವ ವಕೀಲ, ಓರ್ವ ಪತ್ರಕರ್ತ ತ್ತು ಓರ್ವ ಸಾಮಾಜಿಕ ಕಾರ್ಯಕರ್ತ ಹೆಸರಿಸಲ್ಪಿದ್ದಾರೆ.

ನಕ್ಸಲ್‌ ಸಂಬಂಧಿ ಚಟುವಟಿಕೆಗಳಲ್ಲಿ ಮತ್ತು ಭೀಮಾ ಕೋರೇಗಾಂವ್‌ ಹಿಂಸೆಯಲ್ಲಿ ಇವರ ಶಂಕಿತ ಪಾತ್ರ ಇರುವುದರ ಬಗ್ಗೆ ಬಲವಾದ ಮಾಹಿತಿ ಲಭಿಸಿದೆ ಎಂದು ಗುಪ್ತಚರ ದಳ ತನ್ನ ಎರಡು ಪುಟಗಳ ವರದಿಯಲ್ಲಿ ಹೇಳಿದೆ. 

Advertisement

ಕಾಶ್ಮೀರ ಕಣಿವೆಯಲ್ಲಿರುವ ವಿವಿಧ ಉಗ್ರ ಸಂಘಟನೆಗಳು ಮತ್ತು ಸಿಪಿಐ ಎಂ ಮಾವೋವಾದಿಗಳ ನಡುವೆ ನಿಕಟ ನಂಟನ್ನು ಬೆಸೆಯುವಲ್ಲಿ ಅನೇಕ ಶಂಕಿತ ನಕ್ಸಲ್‌ ಸಹಾನುಭೂತಿದಾರರು ಯತ್ನಿಸುತ್ತಿದ್ದಾರೆ ಎಂದು ವರದಿಯು ಹೇಳಿದೆ.   

ಕಳೆದ ವರ್ಷ ಸಂಭವಿಸಿದ್ದ ಭೀಮಾ ಕೋರೇಗಾಂವ್‌ ಹಿಂಸೆಯ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಪೊಲೀಸರು ಕಾಶ್ಮೀರದಲ್ಲಿ ಸಂಗ್ರಹಿಸಿರುವ ಅನೇಕ ಮೂಲಗಳ ಮಾಹಿತಿ ಮತ್ತು ವಶಪಡಿಸಿಕೊಂಡಿರುವ ಪತ್ರದ ಆಧಾರದಲ್ಲಿ ದೇಶಾದ್ಯಂತದ ನಕ್ಸಲ್‌ ಜಾಲ ಮತ್ತು ಅದರ ಐವರು ಮಾಸ್ಟರ್‌ ಮೈಂಡ್‌ಗಳು ಕಾರ್ಯಾಚರಿಸುತ್ತಿರುವುದರ ಬಗ್ಗೆ ಗುಪ್ತ ಚರ ದಳ ತನ್ನ ವರದಿಯಲ್ಲಿ ವಿಸ್ತೃತ ಮಾಹಿತಿ ನೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next