Advertisement
ಪುರಸಭೆಗೆ ಭೇಟಿ ನೀಡಿ ಮಾಸ್ಕ್ ಧಾರಣೆಗೆ ದಂಡ ಪ್ರಕರಣ ಕಡಿಮೆ ದಾಖಲಿಸಿದ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.
Related Articles
Advertisement
ಎಸಿ ಕಚೇರಿಯ ಸಿಬಂದಿ ಸ್ಥಳದಲ್ಲಿ ಇರಲಿಲ್ಲ. ಹಾಜರಿ ಸರಿಯಾಗಿ ದಾಖಲಿಸಿರಲಿಲ್ಲ. ಇದನ್ನು ಗಮನಿಸಿ ನೋಟಿಸ್ ನೀಡುವುದಾಗಿ ಕಚೇರಿ ವ್ಯವಸ್ಥಾಪಕರಿಗೆ ಹೇಳಿದರು.
ಉಪನೋಂದಣಿ ಕಚೇರಿಗೆ ಭೇಟಿ ನೀಡಿದಾಗ ಜನಸಂದಣಿ ವಿಪರೀತ ಇತ್ತು. 80 ವಯಸ್ಸು ಕಳೆದವರೂ ಕಾಯುತ್ತಿದ್ದರು. ಉಪನೋಂದಣಾಧಿಕಾರಿ ಸತೀಶ್ ಅವರನ್ನು ಕರೆದು, ವಯಸ್ಸಾದವರನ್ನು ಮೊದಲು ಕಳುಹಿಸಿ, ಟೋಕನ್ ವ್ಯವಸ್ಥೆ ಮೂಲಕ ಕಡಿಮೆ ಜನರು ಕಚೇರಿಯಲ್ಲಿ ಇರುವಂತೆ ಮಾಡಲು ಸಲಹೆ ನೀಡಿದರು.
ಎಪಿಎಂಸಿಗೆ ಭೇಟಿ ನೀಡಿ ಜ್ವರ ಮಾಪಕ ಇಲ್ಲ, ಸ್ಯಾನಿಟೈಸರ್ ಇಟ್ಟಿಲ್ಲ ಎಂದು ಆಕ್ಷೇಪಿಸಿದಾಗ, ಕಾರ್ಯದರ್ಶಿ ದೀಪ್ತಿ ಅವರು ವಿವರ ನೀಡಿ ಇಲ್ಲಿಗೆ ಸಾರ್ವಜನಿಕರ ಭೇಟಿ ಇರುವುದಿಲ್ಲ. ವ್ಯಾಪಾರಿಗಳೂ ಬರುವುದಿಲ್ಲ. ಕಚೇರಿ ಸಿಬಂದಿಯಷ್ಟೇ ಬರುವ ಕಾರಣ ಅದಕ್ಕೆ ಬೇಕಾದಷ್ಟೇ ವ್ಯವಸ್ಥೆ ಮಾಡಲಾಗಿದೆ ಎಂದರು.
ಪರಿಶೀಲಿಸಲಾಗಿದೆಕೋವಿಡ್-19 ಹರಡುವುದು ತಡೆಯಲು ಸರಕಾರ ಇಷ್ಟೆಲ್ಲ ನಿಯಮಗಳನ್ನು ರೂಪಿಸುತ್ತಿದ್ದು ತಳಹಂತದಲ್ಲಿ ಅನುಷ್ಠಾನ ಆಗದೇ ಇದ್ದರೆ ಹೇಗೆ? ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಲಾಗಿದೆ. ಇದರ ವರದಿಯನ್ನು ಲೋಕಾಯುಕ್ತ ಮೇಲಧಿಕಾರಿಗಳಿಗೆ, ಡಿಸಿಗೆ ಕಳುಹಿಸಲಾಗುವುದು ಎಂದು ಡಿವೈಎಸ್ಪಿ ಭಾಸ್ಕರ ರೆಡ್ಡಿ ಹೇಳಿದರು.