Advertisement

ಉಪ್ಪಿನಂಗಡಿ: ಬಸ್‌ನ ಬಾಗಿಲು ಕಿತ್ತೇ ಹೋಯ್ತು! 

01:13 AM Sep 08, 2017 | Karthik A |

ಉಪ್ಪಿನಂಗಡಿ: ಬಸ್ಸಿಗೆ ಹತ್ತುವ ಗದ್ದಲದಿಂದಾಗಿ ಕೆಎಸ್ಸಾರ್ಟಿಸಿ ಬಸ್‌ನ ಹಿಂಬದಿಯ ಬಾಗಿಲೇ ಕಿತ್ತು ಹೋದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಧರ್ಮಸ್ಥಳದಿಂದ ಮಡಿಕೇರಿ- ಮೈಸೂರಿಗೆ ಹೋಗುವ ಬಸ್‌ ಬೆಳಗ್ಗೆ 8 ಗಂಟೆಗೆ ಉಪ್ಪಿನಂಗಡಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದು, ಈ ಸಂದರ್ಭ ಬಸ್‌ಗೆ ಹತ್ತಲು ಶಾಲಾ ಮಕ್ಕಳು, ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇದರಿಂದ ಈ ಸಂದರ್ಭ ನೂಕುನುಗ್ಗಲು ಉಂಟಾಗುತ್ತದೆ. ಇಂದು ಕೂಡಾ ಇದೇ ರೀತಿ ಆದಾಗ ಯಾರೋ ಬಾಗಿಲಿನಲ್ಲಿ ನೇತಾಡಿದ್ದು, ಬಸ್‌ನ ಹಿಂಬದಿಯ ಬಾಗಿಲು ಕಿತ್ತು ಹೋಗಿದೆ.

Advertisement

ವಿನಾ ಕಾರಣ ಗದ್ದಲ
ಉಪ್ಪಿನಂಗಡಿ ಬಸ್‌ ನಿಲ್ದಾಣದಿಂದ ಪುತ್ತೂರಿಗೆ 6:30ರಿಂದ ಕೆಎಸ್ಸಾರ್ಟಿಸಿ ಬಸ್‌ ಆರಂಭವಾಗುತ್ತದೆ. ಆಮೇಲೆ 15 ನಿಮಿಷ ಕ್ಕೊಂದು ಬಸ್‌ ಇದ್ದರೂ ವಿದ್ಯಾರ್ಥಿಗಳು ಹಾಗೂ ಪುತ್ತೂರಿಗೆ ಕೆಲಸಕ್ಕಾಗಿ ತೆರಳುವವರು ಅದರಲ್ಲಿ ಹೋಗದೇ ಮಡಿಕೇರಿಗೆ ಹೋಗುವ ವೇಗದೂತ ಬಸ್‌ಗಾಗಿ ಕಾಯುತ್ತಾರೆ. ಮಡಿಕೇರಿಗೆ ತೆರಳುವ ಬಸ್‌ಗಳು ಉಪ್ಪಿನಂಗಡಿಯಿಂದ ಬಿಟ್ಟರೆ, ಮತ್ತೆ ಅದಕ್ಕೆ ನಿಲುಗಡೆ ನೀಡುವುದು ಪುತ್ತೂರಿನಲ್ಲಿಯೇ. ಹಾಗಾಗಿ ಅದಕ್ಕಾಗಿ ಕಾಯುವ ಮೂಲಕ ಒಂದೆಡೆ ವಿನಾಕಾರಣ ನೂಕುನುಗ್ಗಲಿಗೆ ಅವಕಾಶವಾದರೆ, ಇನ್ನೊಂದೆಡೆ ಉಪ್ಪಿನಂಗಡಿಯಿಂದ ಮಡಿಕೇರಿ, ಮೈಸೂರಿಗೆ ಪ್ರಯಾಣಿಸುವವರಿಗೂ ಸೀಟು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ ವರ್ಷವೂ ಇದೇ ರೀತಿಯ ನೂಕುನುಗ್ಗಲಿನಿಂದಾಗಿ ಉಪ್ಪಿನಂಗಡಿಯಲ್ಲಿ ಮಡಿಕೇರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸೊಂದರ ಬಾಗಿಲು ಕಿತ್ತುಹೋದ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next