Advertisement

ಮಹಾಘಟಬಂಧನದಲ್ಲಿ ನಿತೀಶ್‌ಗೆ ಜಾಗ ಇಲ್ಲ: ತೇಜಸ್ವಿ ಯಾದವ್‌

11:31 AM Jun 27, 2018 | Team Udayavani |

ಪಟ್ನಾ : ‘ಎನ್‌ಡಿಎ ಮೈತ್ರಿಕೂಟದಲ್ಲಿ ನಿರಾಶರಾಗಿ ಬಿಹಾರದ ಮಹಾ ಘಟಬಂಧನಕ್ಕೆ ಮರಳಲು ಕಾತರರಾಗಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಘಟಬಂಧನದ ಬಾಗಿಲು ಮುಚ್ಚಿದೆ’ ಎಂದು ಆರ್‌ಜೆಡಿ ನಾಯಕ ಮತ್ತು ಮಾಜಿ ಬಿಹಾರ ಉಪ ಮುಖ್ಯಮಂತ್ರಿ  ತೇಜಸ್ವಿ ಯಾದವ್‌ ಹೇಳಿದ್ದಾರೆ. 

Advertisement

‘ನನ್ನ ಅಂಕಲ್‌ ಆಗಿರುವ ಜೆಡಿಯು ನಾಯಕ ಮತ್ತು  ಸಿಎಂ ನಿತೀಶ್‌ ಅವರಿಗೆ ಈಗ ಮಹಾ ಘಟಬಂಧನದಲ್ಲಿ ಜಾಗ ಇಲ್ಲ’ ಎಂದು ತೇಜಸ್ವಿ ಹೇಳಿದ್ದಾರೆ. 

‘ನಿತೀಶ್‌ ಅವರು ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಲ್ಲಿ  ಮಹಾ ಘಟಬಂಧನಕ್ಕೆ ಅವರ ಪುನರಾಗಮನವನ್ನು ಪರಿಗಣಿಸಬಹುದಾಗಿದೆ’ ಎಂದು ಆರ್‌ಜೆ ಡಿ ಮಿತ್ರ ಪಕ್ಷ ಕಾಂಗ್ರೆಸ್‌ ಹೇಳಿರುವುದನ್ನು ತಿರಸ್ಕರಿಸಿದ ತೇಜಸ್ವಿ ಯಾದವ್‌, “ಮಹಾಘಟಬಂಧನದಲ್ಲಿನ್ನು ನಿತೀಶ್‌ಗೆ ಜಾಗ ಇಲ್ಲ’ ಎಂದು ಸಾರಿದರು. 

“ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್‌ಗೆ ಅಧಿಕಾರ ಇಲ್ಲ,ಮಹಾ ಘಟಬಂಧನಕ್ಕೆ ಮರಳಲು ಕಾತರರಾಗಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಜಾಗ ಇಲ್ಲ’ ಎಂದು ತೇಜಸ್ವಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next