Advertisement

ಅನಿಯಂತ್ರಿತ ಠೇವಣಿಗಳ ನಿಷೇಧ

12:30 AM Mar 13, 2019 | Team Udayavani |

ಹೊಸದಿಲ್ಲಿ: ಅನಿಯಂತ್ರಿತ ಠೇವಣಿ ವಲಯದ ಮೇಲೆ ಕಠಿನ ನಿಯಮ ಜಾರಿಗೊಳಿಸಿರುವ ಕೇಂದ್ರ ಸರಕಾರ, ಬಿಲ್ಡರ್‌ಗಳು, ಚಿನ್ನಾಭರಣ ವ್ಯಾಪಾರಿಗಳು ಹಾಗೂ ಇತರ ಸಂಸ್ಥೆಗಳಿಂದ ಹೈ-ರಿಸ್ಕ್ ಠೇವಣಿ ಸಂಗ್ರಹದ ಯೋಜನೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ತಮ್ಮಲ್ಲಿ ಹಣ ಹೂಡಿದರೆ ಆಕರ್ಷಕ ಬಡ್ಡಿ ನೀಡುವ ಆಮಿಷಗಳನ್ನು ತೋರಿಸಿ ಸಾರ್ವಜನಿಕರಿಂದ ಹಣ ಠೇವಣಿ ಸಂಗ್ರಹಿಸುವ ಈ ಸಂಸ್ಥೆಗಳು, ಆ ಹಣವನ್ನು ತಮ್ಮ ಅಗತ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತವೆ. 2ನೇ ದರ್ಜೆ ಹಾಗೂ 3ನೇ ದರ್ಜೆಯ ನಗರಗಳಲ್ಲಿ ಇದು ಸರ್ವೇ ಸಾಮಾನ್ಯ ಸಂಗತಿಯಾಗಿದೆ ಎಂದು ಸರಕಾರ ತಿಳಿಸಿದೆ. ಫೆ. 21ರಂದೇ ಅನಿಯಂತ್ರಿತ ಠೇವಣಿ ಯೋಜನೆಗಳನ್ನು ನಿಷೇಧಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿತ್ತು. ಇಂಥ ಯೋಜನೆಗಳು ಸೆಬಿಯ ನಿಯಮಗಳನ್ನು ಉಲ್ಲಂ ಸುತ್ತವೆ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next