Advertisement

ನೆಚ್ಚಿನ ನಟನ ಭೇಟಿ ಸಾಧ್ಯವಾಗಿಲ್ಲವೆಂದು ಹುಚ್ಚು ಅಭಿಮಾನಿ ಆತ್ಮಹತ್ಯೆ!

11:09 AM Sep 06, 2018 | |

ವಿಜಯವಾಡ: ತನ್ನ ನೆಚ್ಚಿನ ನಟನ ಭೇಟಿ ಸಾಧ್ಯಾವಾಗಿಲ್ಲ ಎಂದು ನೊಂದ ಯುವಕನೊಬ್ಬ ಡೆತ್‌ ನೋಟ್‌ ಬರೆದಿಟ್ಟು ಸಾವಿಗೆ ಶರಣಾದ ಘಟನೆ ನಡೆದಿದೆ.

Advertisement

ಕೊಮಟಾವೆಲ್ಲಿ ಅನಿಲ್‌ ಕುಮಾರ್‌ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಖ್ಯಾತ ನಟ ಪವನ್‌ ಕಲ್ಯಾಣ್‌ ಅವರ ಕಟ್ಟಾ ಅಭಿಮಾನಿಯಾಗಿದ್ದ. 

ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ ನೋಟ್‌ ಪತ್ತೆಯಾಗಿದೆ. 

ಪವನಣ್ಣ  ನೀವಂದ್ರೆ ನನಗೆ ಹುಚ್ಚು ಅಭಿಮಾನ. ಬದುಕಿರುವಾಗ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ನಿಮ್ಮ ಕೈಯಾರೆ ನನ್ನ ಅಂತ್ಯಕ್ರಿಯೆ ನಡೆಯಬೇಕು ಎಂದು ಬರೆದು ಸಾವಿಗೆ ಶರಣಾಗಿದ್ದಾನೆ. ಇತೀ ನಿಮ್ಮ  ಅನಿಲ್‌ ಕುಮಾರ್‌.. ಜನ ಸೇನಾನಿ ಎಂದು ಬರೆಯಲಾಗಿದೆ.

ಪೊಲೀಸರು ಆತ್ಮಹತ್ಯೆ  ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next