Advertisement

DK ಶಿವಕುಮಾರ್ ಕಮೀಶನ್ ಪಡಿತಿದ್ರಾ  : ಸಚಿವ ಉಮೇಶ್ ಕತ್ತಿ ಟೀಕೆ

06:41 PM May 19, 2021 | Team Udayavani |

ಬಾಗಲಕೋಟೆ : ಕೋವಿಡ್ ಸಂದರ್ಭದಲ್ಲೂ ಬಿಜೆಪಿ ಸರ್ಕಾರ, ಸಚಿವರು ಕಮೀಶನ್ ಪಡೆಯುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಆರೋಪಕ್ಕೆ ಆಹಾರ ಮತ್ತು ನಾಗರಿಕ ಸರಬರಾದು, ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ತೀಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಡಿ.ಕೆ. ಶಿವಕುಮಾರ ಕೂಡ ಸಚಿವರಾದವರು,. ಸರ್ಕಾರದಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿದ್ದವರು. ಅವರೂ ಕೂಡ ಕಮೀಶನ್ ಪಡೆಯುತ್ತಿದ್ರಾ ಎಂಬುದು ಸ್ಪಷ್ಟಪಡಿಸಬೇಕು ಎಂದರು.

ಶಿವಕುಮಾರ ಅವರಿಗೆ ಇಡಿ, ಎಸಿಬಿ ದಾಳಿ ಎಲ್ಲವೂ ಮುಗಿದಿದೆ. ಅವರಿಗೆ ಕಮೀಶನ್ ಪಡೆಯುವುದು ಗೊತ್ತಿಗೆ. ಹೀಗಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇಂತಹ ಆರೋಪ ಮಾಡುವ ಮೊದಲು ತಾವು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ನಾವು ಕಮೀಶನ್ ಪಡೆದಿರುವ ಕುರಿತು ದಾಖಲೆ ಇದ್ದರೆ ಕೊಡಲಿ. ಪೊಲೀಸರಿಗೆ, ನ್ಯಾಯಾಲಯಕ್ಕೆ ದೂರು ಕೊಡಲಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next