Advertisement

MLC ಯಾಗಿ ಉಮಾಶ್ರೀ ಆಯ್ಕೆ : ಅಭಿಮಾನಿಗಳಿಂದ ಸಂಭ್ರಮಾಚರಣೆ

10:31 PM Aug 19, 2023 | Team Udayavani |

ರಬಕವಿ-ಬನಹಟ್ಟಿ: ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿ, ಮಾಜಿ ಸಚಿವೆ ಉಮಾಶ್ರೀ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರಿಂದ ಅವರ ಅಭಿಮಾನಿಗಳು ಶನಿವಾರ ಸಂಜೆ ರಬಕವಿ-ಬನಹಟ್ಟಿಯ ವಿವಿಧ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಾಚರಣೆ ಆಚರಿಸಿದರು.

Advertisement

ಕಳೆದ ವಿಧಾನಸಭೆ ಚುನಾವಣೆಯಲ್ಲಿ ತೇರದಾಳ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಉಮಾಶ್ರೀಯವರಿಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಅವರ ಅಭಿಮಾನಿಗಳು ತೀವ್ರ ನಿರಾಶೆಗೊಂಡಿದ್ದರು. ಈಗ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿ ಉಮಾಶ್ರೀಯವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವದರಿಂದ ಅವರ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

ಕಾಂಗ್ರೆಸ್ ಮುಖಂಡರಾದ ಬಸವರಾಜ ಗುಡೋಡಗಿ, ರಾಹುಲ ಕಲಾಲ, ದಾನಪ್ಪ ಹುಲಜತ್ತಿ, ರಾಜು ಕುಲಕರ್ಣಿ, ಚಿದಾನಂದ ಗಾಳಿ, ಸಂಜಯ ಜೋತಾವರ, ಮೊಹಮ್ಮದ ಝಾರೆ, ನೀಲಕಂಠ ಮುತ್ತೂರ, ಅಸ್ಲಂ ಶಿಲ್ಲೇದಾರ, ಮಾಯಪ್ಪ ಕರಿಜ್ಯೋತಿ, ರಾಮು ಜುಗಳಿ, ಪಿಂಟು ಕುಂಬಾರ, ಶಂಕರ ಹಿಪ್ಪರಗಿ, ದೇವಪ್ಪ ಮಹಿಷವಾಡಗಿ, ರಾಜು ಭದ್ರನ್ನವರ, ಯಾಸಿನ ಡಲಾಯತ, ಇರ್ಫಾನ ಮಂಟೂರ, ಸಚಿನ ಹಟ್ಟಿ , ಶ್ರೀಲ ಮಠಪತಿ, ಮಹಾಲಿಂಗ ಮುಧೋಳ, ಅನೀಲ ವಾಘ್ಮೋರೆ, ಸಮೀರ ಚಿಂಚಲಿ ಸೇರಿದಂತೆ ಹಲವರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next