Advertisement

ಉಳ್ಳಾಲ : ಮಸೀದಿಯೊಳಗೆ ನುಗ್ಗಿ ಮಹಿಳೆಯರೊಂದಿಗೆ ಅಸಭ್ಯ ವರ್ತನೆ; ಆರೋಪಿ ಬಂಧನ

08:37 PM Apr 30, 2022 | Team Udayavani |

ಉಳ್ಳಾಲ : ಮಸೀದಿಯೊಳಗೆ ಮಹಿಳೆಯರು ನಮಾಜು ಮಾಡುತ್ತಿರುವ ಕೊಠಡಿಗೆ ಅಕ್ರಮವಾಗಿ ಪ್ರವೇಶ ಮಾಡಿದ ಯುವಕನೋರ್ವ ಅವರೊಂದಿಗೆ ಅಶ್ಲೀಲವಾಗಿ ವರ್ತಿಸಿರುವ ಘಟನೆ ತೊಕ್ಕೊಟ್ಟು ಹುದಾ ಜುಮಾ ಮಸೀದಿಯಲ್ಲಿ ನಸುಕಿನ 2 ಗಂಟೆ ವೇಳೆ ನಡೆದಿದೆ.

Advertisement

ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳದ ಬೆಳ್ಮಣ್‌ ಮಂಜರೆಪಲ್ಕೆ ನಿವಾಸಿ ಸುಜೀತ್‌ ಶೆಟ್ಟಿ(26) ಬಂಧಿತ ಆರೋಪಿ.

ತೊಕ್ಕೊಟ್ಟಿನ ಹುದಾ ಜುಮಾ ಮಸೀದಿಯಲ್ಲಿ ಎ. 28ರಂದು ರಾತ್ರಿ ರಂಜಾನ್‌ ಪ್ರಯುಕ್ತ “ಲೈಲ್‌ ಖದರ್‌’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳೆಯರು, ಹೆಣ್ಣು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಎ. 29ರಂದು ಮುಂಜಾನೆ 2 ಗಂಟೆ ಸುಮಾರಿಗೆ ಮಸೀದಿಯಲ್ಲಿ ಮಹಿಳೆಯರು ನಮಾಜು ಮಾಡುವ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸುಜೀತ್‌ ಅಲ್ಲಿದ್ದ ಹೆಣ್ಣು ಮಕ್ಕಳ ಕೈಹಿಡಿದು ಅಶ್ಲೀಲವಾಗಿ ವರ್ತಿಸಿ, ಗುಪ್ತಾಂಗವನ್ನು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಅಲ್ಲದೆ ಕಾರ್ಯಕ್ರಮಕ್ಕೆ ಅಡ್ಡಪಡಿಸಿ ಧರ್ಮಕ್ಕೆ ಅಪಮಾನ ಮಾಡಿದ್ದಾನೆ ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೂವರು ಮಹಿಳೆಯರು ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸುಜೀತ್‌ ಬಾರೊಂದರಲ್ಲಿ ಕ್ಯಾಷಿಯರ್‌ ಆಗಿ ದುಡಿಯುತ್ತಿದ್ದ.

ಇದನ್ನೂ ಓದಿ : 2 ಜೀವಗಳು ಉಳಿಯಿತು: ಅಂಗಾಂಗ ದಾನಿಯಾಗಿದ 5 ವರ್ಷದ ಬಾಲಕಿ!

ಹೋಂ ಗಾರ್ಡ್‌ ಸೇವೆಯಿಂದ ವಜಾಗೊಂಡಿದ್ದ ಆರೋಪಿ !
2018ರ ಮಾರ್ಚ್‌ ತಿಂಗಳಲ್ಲಿ ಉಡುಪಿ ಜಿಲ್ಲೆಯ ಪಡುಬಿದ್ರಿ ವಿಭಾಗದ ಶಿರ್ವ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಹೋಂ ಗಾರ್ಡ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಜಿತ್‌ ಶೆಟ್ಟಿಯನ್ನು ಉಡುಪಿ ಜಿಲ್ಲಾ ಹೋಂ ಕಮಾಂಡೆಂಟ್‌ ಡಾ| ಕೆ. ಪ್ರಕಾಶ್‌ ಶೆಟ್ಟಿ ಅಮಾನತುಗೊಳಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ 11 ಯುವತಿಯರ ಜತೆಗೆ ಪ್ರತ್ಯೇಕವಾಗಿ ಇದ್ದಂತಹ ಖಾಸಗಿ ಫೋಟೋಗಳನ್ನು ವೈರಲ್‌ ಮಾಡಿದ್ದ. ಇವು ವೈರಲ್‌ ಆಗಿ ಯುವತಿಯರಿಗೆ ಮುಜುಗರ ಉಂಟು ಮಾಡಿತ್ತು. ಈ ಕುರಿತು ಯಾವುದೇ ಪ್ರಕರಣಗಳು ದಾಖಲಾಗದೇ ಇದ್ದರೂ, ತನಿಖೆ ನಡೆಸಿ ವಿಕೃತ ಮನಸ್ಥಿತಿಯ ಆರೋಪಿ ಸುಜಿತ್‌ನನ್ನು ಉಡುಪಿ ಕಮಾಂಡೆಂಟ್‌ ಅಮಾನತುಗೊಳಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next