Advertisement

Ullal; ಕೊಲ್ಯ ಹೆದ್ದಾರಿಯಲ್ಲಿ ಬೈಕ್‌ ತಡೆದು ಯುವಕನ ಕೊಲೆ ಯತ್ನ; ಆರೋಪಿಯ ಬಂಧನ

10:11 PM Feb 17, 2024 | Team Udayavani |

ಉಳ್ಳಾಲ: ಬೈಕ್‌ನಲ್ಲಿ ಚಲಿಸುತ್ತಿದ್ದ ಯುವಕನ ತಡೆದು ಇರಿದು ಕೊಲೆ ಮಾಡಲು ಯತ್ನಿಸಿದ ಘಟನೆ ರಾ. ಹೆ. 66ರ ಕೊಲ್ಯದಲ್ಲಿ ಶುಕ್ರವಾರ ನಡೆದಿದ್ದು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

Advertisement

ಕುಂಪಲ ನಿವಾಸಿ ಮಹಮ್ಮದ್‌ ಆರೀಫ್‌ (29)ಇರಿತಕ್ಕೊಳಗಾದ ಯುವಕ. ಘಟನೆಗೆ ಸಂಬಂಧಿಸಿ ಪ್ರಮುಖ ಆರೋಪಿ ಮುಝಾಂಬಿಲ್‌ನನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಆರೀಫ್‌ ಶುಕ್ರವಾರ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕೊಲ್ಯದಲ್ಲಿ ಮುಝಮ್ಮಿಲ್‌ ಮತ್ತು ನಿಸಾರ್‌ ಎಂಬಿಬ್ಬರು ಆರೀಫ್‌ನನ್ನು ತಡೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ್ದಾರೆ.

ಈ ವೇಳೆ ಮುಝಮ್ಮಿಲ್‌ ಚೂರಿಯಿಂದ ಇರಿಯಲು ಯತ್ನಿಸಿದ ಸಂದರ್ಭ ಆರೀಫ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಬೆನ್ನಿಗೆ ಗಾಯವಾಗಿದೆ. ಆಬಳಿಕ ಅವರಿಬ್ಬರು ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಆರೀಫ್‌ನನ್ನು ಸ್ಥಳದಲ್ಲಿದ್ದ ಶ್ರವಣ್‌ ಮತ್ತು ಉತ್ತಮ್‌ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next