Advertisement

ಉಜ್ಜಯಿನಿ ಶ್ರೀ ಹಾರೈಕೆ

12:05 AM May 31, 2019 | Lakshmi GovindaRaj |

ಬಳ್ಳಾರಿ: ಬಿಜೆಪಿ ಹಾಗೂ ಮಿತ್ರ ಪಕ್ಷಗಳು 352 ಕ್ಷೇತ್ರಗಳಲ್ಲಿ ಜಯಗಳಿಸಿ ಎರಡನೇ ಅವಧಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿಯವರಿಗೆ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇ ಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಶುಭಹಾರೈಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಧಾನಿ ಮೋದಿ ಭಾರತ ಸಂವಿಧಾನದ ಆಶಯಕ್ಕನುಗುಣವಾಗಿ ಪ್ರಜಾಸತ್ತಾತ್ಮಕ ಜಾತ್ಯತೀತ ಸಮಾಜವಾದದ ನಿಲುವನ್ನು ತಾಳಲಿ. ಸಮಸ್ತ ಜನತೆಯ ಸರ್ವಾಂ ಗೀಣ ಪ್ರಗತಿ ಸಾಧಿ ಸುವಂತಹ ಕಾರ್ಯ ಯೋಜನೆಗಳನ್ನು ಕೈಗೊಳ್ಳಲಿ.

ಭಾರತೀಯ ಧರ್ಮ-ಸಂಸ್ಕೃತಿಯೊಂದಿಗೆ ಇತರೆ ಧರ್ಮಗಳ ಸಾರಸತ್ತದ ಮುಖೇನ ಭಾರತದ ಏಕತೆ ಮತ್ತು ಸಮಗ್ರತೆ ಪ್ರದರ್ಶಿಸಲಿ ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ಸಾರಿದ್ದಾರೆ. ದೇಶದ ಆರ್ಥಿಕ ಅಭಿವೃದ್ಧಿಗಾಗಿ ವಿದೇಶಿ ಹೂಡಿಕೆಯೊಂದಿಗೆ ಆರ್ಥಿಕ ವಲಯಗಳ ಭದ್ರತೆ ಕಾಪಾಡಬೇಕು ಎಂದು ಶ್ರೀಗಳು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next