Advertisement

Ujire: ಮತ್ತೆ ನದಿಯಾದ ರಾಷ್ಟ್ರೀಯ ಹೆದ್ದಾರಿ!

12:15 AM Jul 18, 2023 | Team Udayavani |

ಬೆಳ್ತಂಗಡಿ: ಮಂಗಳೂರು - ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ 73ರ ಉಜಿರೆಯ ಕೆಳಗಿನ ಪೇಟೆಯಲ್ಲಿ ಸೋಮವಾರವೂ ಸಂಜೆ ರಸ್ತೆಯಲ್ಲೇ ಮಳೆನೀರು ಹರಿದ ಪರಿಣಾಮ ಅಕ್ಷರಶಃ ನದಿಯಂತೆ ಕಂಡುಬಂದಿತು.

Advertisement

ಸೋಮವಾರ ಸಂಜೆ ಉಜಿರೆ ಪರಿಸರ ದಲ್ಲಿ ಸುರಿದ ಭಾರೀ ಮಳೆಗೆ ಕೆಳಗಿನ ಪೇಟೆಯಲ್ಲಿ ನೀರು ರಸ್ತೆಯಲ್ಲಿ ಎರಡು ಅಡಿಗಿಂತ ಅಧಿಕ ಹರಿದು ಸಮೀಪದ ಅಂಗಡಿಗಳಿಗೆ ನುಗ್ಗಿತಲ್ಲದೆ, ದ್ವಿಚಕ್ರ ವಾಹನ, ಕಾರುಗಳ ಸಹಿತ ಸಣ್ಣಪುಟ್ಟ ವಾಹನಗಳಿಗೆ, ಪಾದಚಾರಿಗಳಿಗೆ ಸಂಚಾರ ತ್ರಾಸದಾಯಕವಾಗಿದೆ. ಜೂ. 14ರಂದು ಹಾಗೂ ಕಳೆದ ವಾರ ಇಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜೂನ್‌ನಲ್ಲಿ ನೀರು ರಸ್ತೆಯಲ್ಲಿ ಹರಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಚರಂಡಿಗಳನ್ನು ದುರಸ್ತಿ ಮಾಡಲಾಗಿತ್ತು. ಆದರೆ ಇದಕ್ಕೆ ಮೂಲ ಕಾರಣವೇನೆಂಬುದನ್ನು ಅಧಿಕಾರಿಗಳು ಪರಿಶೀಲಿಸದೆ ಜನರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ; ಪ್ರತೀ ಮಳೆಗಾಲದಲ್ಲಿ ಸಮಸ್ಯೆ ಮರುಕಳಿಸು ತ್ತಿದ್ದರೂ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯ, ಗಿಡಗಂಟಿ ತೆರವುಗೊಳಿಸ ದಿರುವುದು ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next