Advertisement

ಉಜಿರೆ-ಧರ್ಮಸ್ಥಳ ರಸ್ತೆ: ಅಪಾಯಕಾರಿ ಮರಗಳ ತೆರವು

09:55 AM Apr 10, 2022 | Team Udayavani |

ಬೆಳ್ತಂಗಡಿ: ಉಜಿರೆಯಿಂದ ಧರ್ಮಸ್ಥಳಕ್ಕೆ ಸಾಗುವ ರಸ್ತೆಯಲ್ಲಿ ನೀರ ಚಿಲುಮೆಯಿಂದ ಕನ್ಯಾಡಿಯವರೆಗೆ ರಸ್ತೆ ಅಂಚಿನಲ್ಲಿ ವಾಲಿನಿಂತಿದ್ದ ಮರಗಳ ತೆರವಿಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

Advertisement

ರಸ್ತೆ ಬದಿಯಲ್ಲಿ ಹಲವು ಅಪಾಯಕಾರಿ ಅಕೇಶಿಯ ಮರಗಳಿದ್ದವು. ಗಾಳಿ ಮಳೆ ಸಂದರ್ಭದಲ್ಲಿ ರಸ್ತೆಗೆ ಬಿದ್ದು ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆ ಇತ್ತು. ಜತೆಗೆ ರಸ್ತೆಬದಿ ಹಾದು ಹೋಗಿರುವ ವಿದ್ಯುತ್‌ ತಂತಿಗೂ ಮರಗಳ ಕೊಂಬೆಗಳು ಬಿದ್ದು ತಂತಿ, ಕಂಬಗಳು ತುಂಡಾಗಿ ವಿದ್ಯುತ್‌ ಪೂರೈಕೆಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇತ್ತು.

ಇದೀಗ ಈ ಭಾಗದಲ್ಲಿ ಆಗಾಗ ಮಳೆ ಸುರಿಯುವ ಕಾರಣ ಈ ಮರಗಳು ಇನ್ನಷ್ಟು ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು. ಈ ಮರಗಳನ್ನು ಅರಣ್ಯ ಇಲಾಖೆ ತೆರವುಗೊಳಿಸುವ ಕಾರಣ ಮೆಸ್ಕಾಂಗು ನಷ್ಟದ ಪ್ರಮಾಣ ಕಡಿಮೆಯಾಗಲಿದೆ. ಕೆಲವು ವರ್ಷಗಳಿಂದ ಆಗಾಗ ಮರಗಳು ಉರುಳುವುದರಿಂದ ಮೆಸ್ಕಾಂ ಲಕ್ಷಾಂತರ ರೂ.ನಷ್ಟ ಅನುಭವಿಸುತ್ತಿತ್ತು. ಆದರೂ ಮೆಸ್ಕಾಂ ಮತ್ತು ಅರಣ್ಯ ಇಲಾಖೆ ನಡುವಿನ ಹೊಂದಾಣಿಕೆ ಕೊರತೆಯಿಂದ ಮರಗಳ ತೆರವಿಗೆ ಕ್ರಮ ಕೈಗೊಂಡಿರಲಿಲ್ಲ.

ಶನಿವಾರ ವಾಹನ ದಟ್ಟಣೆ ಇರುವ ಸಮಯದಲ್ಲೆ ಮರ ತೆರವಿಗೆ ಮುಂದಾಗಿದ್ದರಿಂದ ಟ್ರಾಫಿಕ್‌ ಜಾಮ್‌ ಸಮಸ್ಯೆ ಎದುರಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next