Advertisement

Kalasa ನೀರುಪಾಲಾಗಿದ್ದ ಯುವಕನ ಶವವನ್ನು ಪತ್ತೆಹಚ್ಚಿದ ಉಜಿರೆ-ಬೆಳಾಲು ಶೌರ್ಯ ಘಟಕ

11:49 PM Jun 18, 2024 | Team Udayavani |

ಬೆಳ್ತಂಗಡಿ: ಕಳಸದ ಅಂಬಾ ತೀರ್ಥ ನದಿಯಲ್ಲಿ ಸ್ನಾನಕ್ಕಿಳಿದು ನೀರುಪಾಲಾಗಿದ್ದ ಮಧ್ಯಪ್ರದೇಶ ಮೂಲದ ಸಾಗರ್‌ (19)ನ ಮೃತದೇಹವನ್ನು ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು ಮೇಲಕ್ಕೆತ್ತಿದ್ದಾರೆ.

Advertisement

ಈಶ್ವರ್‌ ಮಲ್ಪೆ ಅವರ ಮೂಲಕ ತಮ್ಮ ತಂಡದ ಕ್ಯಾಪ್ಟನ್‌ ಸಂತೋಷ್‌ ಅವರಿಗೆ ಬಂದಿದ್ದ ಕರೆಗೆ ಸ್ಪಂದಿಸಿದ ತಂಡ ಮೃತದೇಹ ಶೋಧ ಕಾರ್ಯಕ್ಕೆ ಉಜಿರೆ-ಬೆಳಾಲು ಘಟಕ ಮುಂದಾಯಿತು.

ಘಟಕದ ಪ್ರತಿನಿಧಿ ರವೀಂದ್ರ, ಕ್ಯಾಪ್ಟನ್‌ ಸಂತೋಷ್‌, ಸಂದೇಶ್‌, ಸುಧೀರ್‌ ಅವರು ಘಟನಾ ಸ್ಥಳಕ್ಕೆ ತೆರಳಿ ಬೆಳಗ್ಗಿನಿಂದ ಮಧ್ಯಾಹ್ನ ದವರೆಗೆ ಶ್ರಮಿಸಿ ಶವವನ್ನು ಮೇಲಕ್ಕೆತ್ತುವಲ್ಲಿ ಸಫ‌ಲರಾದರು. ಗ್ರಾಮಾಭಿವೃದ್ಧಿ ಯೋಜನೆಯ ಕಳಸದ ಯೋಜನಾಧಿಕಾರಿ ಹಾಗೂ ಕಳಸದ ಶೌರ್ಯ ಟೀಮ್‌ ಪೂರಕ ಸಹಕಾರ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next