Advertisement

ಹೊಸದು ಕಾಲಿರಿಸುವ ಸಮಯ

12:26 PM Apr 14, 2021 | Team Udayavani |

“ಯುಗ’ ಎಂದರೆ ಶಕ, “ಆದಿ’ ಎಂದರೆ “ಆರಂಭ’ಎಂಬ ಅರ್ಥವನ್ನು ಯುಗಾದಿ ಕೊಡುತ್ತದೆ. ಪ್ರಸ್ತುತ ನಾವೆಲ್ಲರೂ ಕಲಿಯುಗದಲ್ಲಿ ಬದುಕುತ್ತಿದ್ದೇವೆ. ಶ್ರೀಕೃಷ್ಣ ಪರಮಾತ್ಮನು ತನ್ನ ಅವತಾರವನ್ನು ಮುಗಿಸಿ ಹೊರಟಂದಿನಿಂದ “ಕಲಿಯುಗ’ ಆರಂಭಗೊಂಡಿದೆ.

Advertisement

ಬ್ರಹ್ಮ ಸೃಷ್ಟಿಯನ್ನು ನಿರ್ಮಿಸಿದ ದಿನ, ಶ್ರೀರಾಮಚಂದ್ರ ವಾಲಿಯನ್ನು ಸಂಹರಿಸಿದದಿನ, ದುರುಳ ರಾವಣನನ್ನು ಕೊಂದುರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವಾಗಿದೆ. ಯುಗಾದಿಯು ಭಾರತೀಯರದೃಷ್ಟಿಯಲ್ಲಿ ನೂತನ ವರ್ಷದ ಹೊಸದಿನ.ಈ ಹೊಸತನಕ್ಕೆ ಕಾಲವೇ ಸ್ಪಂದಿಸುತ್ತದೆ.ಹೊಸ ವರುಷಕ್ಕೆಸ್ವಾಗತ ಕೋರುವಂತೆ ಬೇವಿನಮರ ಚಿಗುರುತ್ತದೆ.

ಹೂ ಬಿಟ್ಟು ಫ‌ಲಭರಿತವಾಗುತ್ತದೆ. ಚಿಗುರೆಲೆಯನ್ನು ಸವಿದ ಕೋಗಿಲೆಯುಪಂಚಮದ ಇಂಚರದಿ ಸುಶ್ರಾವ್ಯ ಕಂಠದಿಂದಕೂಗುತ್ತದೆ. ವಸಂತ ಕಾಲದ ಆಗಮನದಿಂದಪ್ರಕೃತಿ ಹೂ ಹಣ್ಣು ಮೈದುಂಬಿ ತನ್ನೆಡೆಗೆಆಕರ್ಷಿಸುವ ಪರ್ವ ಕಾಲವಿದು.ಪ್ರಕೃತಿಯು ತನ್ನ ಮುಪ್ಪಾದ ಎಲೆಗಳನ್ನುಉದುರಿಸಿ ಚಿಗುರೆಲೆಗಳನ್ನು ತೋರುವಾಗಮನುಷ್ಯನು ಹೊಸ ವರುಷವನ್ನುಆಚರಿಸುತ್ತಾನೆ. ಪ್ರಕೃತಿಯ ಹೊಸ ಚೈತನ್ಯಮನುಷ್ಯನಿಗೂ ಚೈತನ್ಯದಾಯಕವಾಗಿದೆ.ವಸಂತನ ಆಗಮನವೆಂದರೆಸಂವತ್ಸರಾಧಿಪತಿಯ ಪಾತ್ರದ ಅನಾವರಣ.ಹೊಸ ಹಸಿರಿನ ಕಲಾ ನಾಯಕನಒಡ್ಡೋಲಗದ ಶುಭ ಮುಹೂರ್ತವೋಎಂಬಂತೆ ಯುಗಾದಿ ಸಾಗಿ ಬಂದಿದೆ.

ಚಾಂದ್ರಮಾನ ಯುಗಾದಿಯನ್ನು ಸಂವತ್ಸರಾರಂಭ ಎಂದು ಕರೆಯಲಾಗುತ್ತದೆ.ಯುಗಾದಿ ಹಬ್ಬವನ್ನು ಭಾರತದ ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಪ್ರಮುಖವಾಗಿ ಆಚರಿಸಲಾಗುತ್ತದೆ. ಆಂಧ್ರ ಪ್ರದೇಶದವರು ಚೈತ್ರ ಶುದ್ಧ ಪಾಡ್ಯಮಿಯಂದು ಯುಗಾದಿಯನ್ನು ಆಚರಿಸುತ್ತಾರೆ.

ಯುಗಾದಿಗೆ ವಿಶೇಷ ಭಕ್ಷ್ಯ :

Advertisement

ಯುಗಾದಿ ಹಬ್ಬಕ್ಕೆ ಕರ್ನಾಟಕದಲ್ಲಿ ವಿಶೇಷ ಭಕ್ಷ್ಯವಾಗಿ ಒಬ್ಬಟ್ಟು ಅಥವಾಹೋಳಿಗೆಯನ್ನು ಮಾಡಲಾಗುತ್ತದೆ. ಅದರಲ್ಲಿಯೂ ವಿವಿಧ ರುಚಿಯ ಒಬ್ಬಟ್ಟು ಇಲ್ಲಿನ ಮತ್ತೂಂದು ವಿಶೇಷ. ಕಾಯಿ ಹೋಳಿಗೆ, ಬೇಳೆ ಹೋಳಿಗೆ, ಸಕ್ಕರೆ ಹೋಳಿಗೆ, ಮಂಡಿಗೆ ಇತ್ಯಾದಿಗಳನ್ನುತಯಾರಿಸಿ ಸವಿದರೆ, ಆಂಧ್ರಪ್ರದೇಶದವರುಭಕ್ಷ್ಯಾಲು ಅಥವಾ ಬೊಬ್ಬಟ್ಲು (ಪೊಲೆಲು)”ಪಚ್ಚಡಿ’ಯನ್ನು ತಯಾರಿಸಿ ಸವಿಯುವ ಸಂಪ್ರದಾಯವಿದೆ.

ಆಚರಣಾ ಕ್ರಮ :

ಯುಗಾದಿ ಹಬ್ಬದ ಆಚರಣೆ ಚಾಂದ್ರಮಾನ ಮತ್ತು ಸೌರಮಾನಎಂಬ ಎರಡು ಪದ್ಧತಿಗಳನ್ವಯರೂಢಿಯಲ್ಲಿದೆ. ಈ ದಿನ ಉಷಃಕಾಲದಲ್ಲಿ ಪರಮಾತ್ಮನ ಸ್ಮರಣೆ ಮಾಡುತ್ತ, ದೇವರಮನೆ, ಮನೆಯ ಮುಖ್ಯ ದ್ವಾರಗಳನ್ನುರಂಗೋಲಿ ತೋರಣಗಳಿಂದ ಸಿಂಗರಿಸಿ,ಅಭ್ಯಂಜನ ಸ್ನಾನ ಮಾಡಿ, ಹೊಸಉಡುಗೆ-ತೊಡುಗೆಗಳನ್ನು ತೊಟ್ಟು,ಹೊಸ ವರ್ಷದ ಪಂಚಾಂಗವನ್ನು ದೇವರಸಮೀಪವಿಟ್ಟು ಪೂಜಿಸಿ, ಅನಂತರ ಬೇವು-ಬೆಲ್ಲ ಸೇವಿಸಿ, ಸನ್ಮಿತ್ರರು ಸೇರಿದಸಭೆಯಲ್ಲಿ ಪುರೋಹಿತರು ಪಠಣಮಾಡುವ ಪಂಚಾಂಗ ಶ್ರವಣವನ್ನುಆಲಿಸುವುದು ರೂಢಿಯಲ್ಲಿದೆ.

ಅಂದರೆನೂರು ವರ್ಷಗಳ ಆಯುಷ್ಯ, ದೃಢಆರೋಗ್ಯ ಸಕಲ ಸಂಪತ್ತಿನ ಪ್ರಾಪ್ತಿಗಾಗಿ, ಸಕಲಾರಿಷ್ಟ ನಿವಾರಣೆಗಾಗಿ ಬೇವು-ಬೆಲ್ಲ ಸೇವನೆ ಮಾಡುತ್ತೇನೆಂದು ಹೇಳಿ ಸೇವಿಸಬೇಕು ಎಂಬುದು ನಡೆದು ಬಂದ ಪದ್ಧತಿ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಯುಗಾದಿ ಆಚರಣೆ ಬಲು ಜೋರಾಗಿ ನಡೆಯುತ್ತಿತ್ತು. ಇಂದಿಗೂ ಕರ್ನಾಟಕದಕೆಲವೆಡೆ ಅತ್ಯಂತ ವಿಜೃಂಭಣೆಯಿಂದಆಚರಿಸಲಾಗುತ್ತದೆ. ಪ್ರಸ್ತುತ ಪೇಟೆಪಟ್ಟಣಗಳಲ್ಲಿ ಹಬ್ಬದ ವಾತಾವರಣಮಾಸಿ ಹೋಗಿದೆ. ಇಂದು ಆಧುನಿಕತೆಯ ಹೊಡೆತಕ್ಕೆ ಸಿಲುಕಿದ ಮನುಷ್ಯದಿನದಿನಕ್ಕೆ ಯಾವುದಕ್ಕೂ ಸಮಯ,ವ್ಯವಧಾನಗಳಿಲ್ಲದೆ ಹಬ್ಬದ ಸಂಭ್ರಮದಸವಿಯಿಂದ ವಂಚಿತನಾಗುತ್ತಿದ್ದಾನೆ. ಮುಂದೆ ಹಾಗಾಗದಿರುವಂತೆ ಮುಂದಿನಪೀಳಿಗೆಗೆ ಯುಗಾದಿಯಂತಹಹಬ್ಬಗಳ ಕುರಿತು ತಿಳಿಸಿ ಸಂಭ್ರಮದಿಂದಹಬ್ಬವನ್ನು ಆಚರಿಸುವ ಇರಾದೆಯನ್ನುಕಲಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ.

ಯುಗಾದಿ ಮಹತ್ವ  : ಚೈತ್ರ-ವೈಶಾಖ ಮಾಸ ಕೇವಲ ಪ್ರಾಕೃತಿಕವಾಗಿ ಮಹತ್ವವುಳ್ಳಕಾಲವಲ್ಲದೆ ಐತಿಹಾಸಿಕ, ಸಾಂಸ್ಕೃತಿಕವಾಗಿಯೂ ಮಹತ್ವಹೊಂದಿದೆ. ಶ್ರೀರಾಮನ ಜನನಚೈತ್ರ ಶುದ್ಧ ನವಮಿಯಂದು,24ನೇ ತೀರ್ಥಂಕರ ಮಹಾವೀರ ಸ್ವಾಮಿಯ ಜನನ ಚೈತ್ರಶುದ್ಧ ತ್ರಯೋದಶಿಯಂದು,ಬುದ್ಧ ಜಯಂತಿ ವೈಶಾಖಪೂರ್ಣಿಮೆಯಂದು ಹೀಗೆಮಹಾನುಭಾವರು ಜನಿಸಿದ ಪುಣ್ಯ ಕಾಲವಾದ ಈ ಮಾಸವು ವೈಶಿಷ್ಟ್ಯದಿಂದ ಕೂಡಿದೆ.

ಚಾಂದ್ರಮಾನ ಯುಗಾದಿಕಳೆದ ನಂತರವೇ ಸೌರಮಾನಯುಗಾದಿ ಬರುತ್ತದೆ. ಇದುಸೌರಮಾನದ ಪ್ರಕಾರ ವರ್ಷದಆರಂಭ, ಸೌರಮಾನದಮೇಷ ಮಾಸಾರಂಭ,ರವಿಯು ಮೇಷ ರಾಶಿಯನ್ನುಪ್ರವೇಶಿಸುವುದರಿಂದ “ಮೇಷ ಸಂಕ್ರಮಣ’ ಎಂದು ಕರೆಯಲ್ಪಡುತ್ತದೆ. ಅಂದಿನಿಂದಸೌರ ವರ್ಷದ ಗಣನೆ ಆರಂಭ.ಆ ದಿನವನ್ನು “ವಿಷು’ವೆಂದು ಕರೆಯುತ್ತಾರೆ

Advertisement

Udayavani is now on Telegram. Click here to join our channel and stay updated with the latest news.

Next