Advertisement

ಯುಗಾದಿ ಹಬ್ಬ ಆಚರಣೆ

11:09 AM Apr 09, 2019 | keerthan |

ಬದಿಯಡ್ಕ: ಜಿಎಸ್ ಬಿ ಸಮಾಜ ಬದಿಯಡ್ಕದ ಆಶ್ರಯದಲ್ಲಿ ಮಾರ್ಚ 6ರಂದು ಯುಗಾದಿ ಹಬ್ಬ ಆಚರಿಸಲಾಯಿತು. ಸಮಾಜದ ಸದಸ್ಯರಿಗಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

Advertisement

ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಕುಂಬಳೆಯ ವೀರವಿಠಲ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾರಯಣ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಭೆಯ ಅಧ್ಯಕ್ಷತೆಯನ್ನು ಬಿ.ಶ್ರಿಧರ ಪೈ ವಹಿಸಿದ್ದರು. ಸಮಾಜದ ಖಜಾಂಜಿಯಾದ ಬಿ.ರವೀಂದ್ರ. ಕಾಮತ್ ಮತ್ತು ಕಾರ್ಯದರ್ಶಿ ಬಿ.ಜ್ಞಾನದೇವ ಶೆಣೈ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಾಲಪ್ರತಿಭೆ ಕನ್ನಡ ಕೋಗಿಲೆ ಖ್ಯಾತಿಯ ಬಿ ಅಪೇಕ್ಷಾ ಪೈಯನ್ನು ಸನ್ಮಾನಿಸಲಾಯಿತು.

ಸನ್ಮಾನ ಪತ್ರವನ್ನು ಬಿ.ಗಣೇಶ.ಪೈ ವಾಚಿಸಿದರು. ಬಿ.ವಿದ್ಯಾ ಎನ್ ಶೆಣೈ ಸ್ವಾಗತಿಸಿ ಬಿ ವಿಠಲದಾಸ ಕಾಮತ್ ವಂದಿಸಿದರು. ತದನಂತರ ಸಮಾಜದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next