Advertisement

Udyavara: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಮೂವರು ವಶಕ್ಕೆ

12:16 AM Sep 07, 2023 | Team Udayavani |

ಕಾಪು: ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ಉದ್ಯಾವರ ಅಂಕುದ್ರು ಉಪ್ಪುಗುಡ್ಡೆ ಬಳಿ ಮಾದಕ ಸೇವನೆಯ ನಶೆಯಲ್ಲಿ ತಿರುಗಾಡುತ್ತಿದ್ದ ಮೂವರನ್ನು ಕಾಪು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಕಾಪು ಪೊಲೀಸ್‌ ಠಾಣೆಯ ಕ್ರೈಂ ಎಸ್ಸೆ$ç ಪುರುಷೋತ್ತಮ್‌ ಅವರು ರೌಂಡ್ಸ್‌ನಲ್ಲಿರುವಾಗ ಉದ್ಯಾವರ ಅಂಕುದ್ರು ಉಪ್ಪುಗುಡ್ಡೆ ಬಳಿಯಲ್ಲಿ ತಿರುಗಾಡುತ್ತಿದ್ದ ಯಶ್‌ (19)ನನ್ನು ವಶಕ್ಕೆ ಪಡೆದುಕೊಂಡು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತ ಮಾದಕ ಸೇವನೆಯ ನಶೆಯಲ್ಲಿರುವುದು ಪತ್ತೆಯಾಗಿದೆ.

ಕಾಪು ಎಸ್ಸೈ ಅಬ್ದುಲ್‌ ಖಾದರ್‌ ಅವರು ರೌಂಡ್ಸ್‌ನಲ್ಲಿರುವಾಗ ಉದ್ಯಾವರ ಅಂಕುದ್ರು ಉಪ್ಪುಗುಡ್ಡೆ ಕ್ರಾಸ್‌ ಬಳಿ ಅನುಮಾನಾಸ್ಪದವಾಗಿ ಕಂಡು ಬಂದ ವಿಜಯ (32) ಮತ್ತು ಸಂತೋಷ (23) ಎಂಬವರನ್ನು ವಶಕ್ಕೆ ಪಡೆದುಕೊಂಡು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇಬ್ಬರೂ ಮಾದಕ ಸೇವನೆಯ ನಶೆಯಲ್ಲಿರುವುದು ಪತ್ತೆಯಾಗಿದೆ. ಮಾದಕ ವಸ್ತು ಸೇವನೆ ಪ್ರಕರಣಗಳಿಗೆ ಸಂಬಂಧಿಸಿ ಮೂವರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಬಗ್ಗೆ ಮಣಿಪಾಲ ಫೊರೆನ್ಸಿಕ್‌ ವಿಭಾಗದ ವೈದ್ಯಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದು, ವೈದ್ಯರು ಗಾಂಜಾ ಸೇವಿಸಿರುವ ಬಗ್ಗೆ ದೃಢಪತ್ರ ನೀಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next