Advertisement

ಮಹಾರಾಷ್ಟ್ರ ಮಳೆ: ಹಳಿ ಮೇಲೆ ಮಣ್ಣು ಬಿದ್ದು ಹಲವು ರೈಲು ರದ್ದು

01:23 PM Aug 05, 2019 | Naveen |

ಉಡುಪಿ : ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಂಕಣರೈಲು ಮಾರ್ಗದ ಮೇಲೆ ಮಣ್ಣು ಜರಿದು ಬಿದ್ದಿದ್ದು ಹಲವು ರೈಲುಗಳನ್ನು ರದ್ದುಪಡಿಸಲಾ ಗಿದೆ. ಮುಂಬಯಿ ಪ್ರದೇಶದಲ್ಲಿ 24 ಗಂಟೆ ಕಾಲ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

Advertisement

ಮಂಗಳೂರು-ಕುರ್ಲಾ ಮತ್ಸ್ಯಗಂಧ ರೈಲನ್ನು(12620) ಕುಂದಾಪುರದಿಂದ ಮಂಗಳೂರಿಗೆ ವಾಪಸ್‌ ಕಳುಹಿಸಲಾಯಿತು. ಕುರ್ಲಾದಿಂದ ಬರುವ ಮತ್ಸ್ಯಗಂಧ ರೈಲನ್ನೂ (12619) ರದ್ದುಪಡಿಸಲಾಗಿದೆ. ಮಂಗಳೂರು ಜಂಕ್ಷನ್‌ನಿಂದ ಮುಂಬಯಿ ಸಿಎಸ್‌ಎಂಟಿಗೆ ಹೋಗಬೇಕಾದ (12134) ರೈಲು, ಸಿಎಸ್‌ಎಂಟಿಯಿಂದ ಬರಬೇಕಾದ ರೈಲು (12133) ಗಳನ್ನೂ ರದ್ದುಪಡಿಸಲಾ ಗಿದೆ. ಎರ್ನಾಕುಳಂ-ಕುರ್ಲಾ ತುರಂತೋ ಎಕ್ಸ್‌ಪ್ರೆಸ್ಸನ್ನು ರದ್ದುಪಡಿಸಲಾಗಿದೆ. ಆ. 5ರ ಕೊಚ್ಚುವೇಲಿ- ಕುರ್ಲಾ (22124) ರೈಲನ್ನೂ ರದ್ದುಪಡಿಸಲಾಗಿದೆ.

ರವಿವಾರದ ಎರ್ನಾಕುಳಂ-ಪುಣೆ ರೈಲನ್ನು (22150) ರದ್ದುಪಡಿಸಲಾಗಿದೆ. ತಿರುವನಂತಪುರ – ಕುರ್ಲಾ (16346) ರೈಲನ್ನು ಶೋರ್ನೂರಿನಿಂದ ರದ್ದುಪಡಿಸಲಾಗಿದೆ. ಕುರ್ಲಾದಿಂದ ತಿರುವನಂತಪುರಕ್ಕೆ ಹೋಗುವ (16345) ನೇತ್ರಾವತಿ ಎಕ್ಸ್‌ಪ್ರೆಸ್‌ ಕೂಡ ರದ್ದಾಗಿದೆ. ಕೊಚ್ಚುವೇಲಿಯಿಂದ ಕುರ್ಲಾಕ್ಕೆ ಹೋಗುವ ರೈಲನ್ನು (12202) ಕಣ್ಣೂರಿನಲ್ಲಿ ರದ್ದುಪಡಿಸ ಲಾಯಿತು ಎಂದು ಕೊಂಕಣ ರೈಲ್ವೇ ಸಾರ್ವಜನಿಕ ಸಂಪರ್ಕ ಪ್ರಬಂಧಕಿ ಸುಧಾ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next