Advertisement

ಉಡುಪಿಗೆ ಶ್ರೀಶ್ರೀ ಭೇಟಿ; ಪೇಜಾವರಶ್ರೀಗಳ ಜತೆ 30ನಿಮಿಷ ಮಾತುಕತೆ

01:34 PM Dec 06, 2017 | Team Udayavani |

ಉಡುಪಿ: ಇತ್ತೀಚೆಗಷ್ಟೇ ಉಡುಪಿಯಲ್ಲಿ ನಡೆದಿದ್ದ ಧರ್ಮ ಸಂಸದ್ ನಿಂದ ದೂರ ಉಳಿದಿದ್ದ ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಬುಧವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಪೇಜಾವರಶ್ರೀಗಳ ಜತೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು.

Advertisement

ಇಂದು ಶ್ರೀಕೃಷ್ಣ ಮಠದಲ್ಲಿ ರವಿಶಂಕರ್ ಗುರೂಜಿ ಅವರು ಪೇಜಾವರಶ್ರೀಗಳನ್ನು ಭೇಟಿಯಾಗಿ ರಾಮಮಂದಿರ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಆದರೆ ಚರ್ಚೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪೇಜಾವರಶ್ರೀಗಳು, ಮಾತುಕತೆ ವಿವರ ಹೇಳಲ್ಲ ಎಂದರು. ರವಿಶಂಕರ ಗುರೂಜಿಗೆ ಧರ್ಮ ಸಂಸದ್ ವಿರೋಧಿಸಿಲ್ಲ. ಅಯೋಧ್ಯೆ ವಿವಾದ ನ್ಯಾಯಾಲಯಗಳ ಹೊರಗೆ ತೀರ್ಮಾನವಾಗಲಿ ಎಂಬುದೇ ಎಲ್ಲರ ಆಶಯ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next