Advertisement

ಶ್ರೀಕೃಷ್ಣಮಠ: ಮಧ್ವಸರೋವರದ ಹೂಳೆತ್ತುವಿಕೆಯಲ್ಲಿ ಪ್ರಗತಿ

01:44 AM Apr 26, 2019 | sudhir |

ಉಡುಪಿ: ಶ್ರೀಕೃಷ್ಣಮಠದ ಮಧ್ವಸರೋವರದಲ್ಲಿ ಬುಧವಾರ ಆರಂಭಗೊಂಡ ಕೆಸರು ಹೂಳೆತ್ತುವಿಕೆ ಕೆಲಸ ಗುರುವಾರ ಮುಂದುವರಿದಿದೆ.
ದೊಡ್ಡ ಸರೋವರದಲ್ಲಿ ಇರುವ ಸಣ್ಣ ಸರೋವರದಲ್ಲಿರುವ ಆಮೆ, ಮೀನುಗಳನ್ನು ಸಂಗ್ರಹಿಸಿ ಬೇರೆಡೆ ಇಟ್ಟಿದ್ದಾರೆ. ದೊಡ್ಡ ಸರೋವರದ ನೀರನ್ನು ಬುಧವಾರ ರಾತ್ರಿ ಖಾಲಿ ಮಾಡಲಾಗಿದೆ. ಗುರುವಾರ ಸಣ್ಣ ಸರೋವರದ ನೀರನ್ನು ಖಾಲಿ ಮಾಡಿದ್ದು ಇದನ್ನು ಸರಿಪಡಿಸಿದ ಬಳಿಕ ದೊಡ್ಡ ಸರೋವರದ ಕೆಸರು ತೆಗೆಯುವ ಕೆಲಸಕ್ಕೆ ಕೈಹಾಕಲಾಗುತ್ತಿದೆ. ಮೂರು ಯಂತ್ರಗಳು ಬಂದಿದ್ದು ಒಂದೆರಡು ದಿನಗಳಲ್ಲಿ ಇದರ ಕೆಲಸ ಮುಗಿಯುವ ನಿರೀಕ್ಷೆ ಇದೆ.
16 ವರ್ಷಗಳ ಹಿಂದೆ ಪಲಿಮಾರು ಶ್ರೀಗಳ ಪರ್ಯಾಯದಲ್ಲಿ ಹೂಳೆತ್ತಿದ ಬಳಿಕ ಈಗ ಮತ್ತೆ ಕಾಮಗಾರಿ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next