Advertisement

ಧಾನ್ಯ ಸಮರ್ಪಣಾ ಕೇಂದ್ರ ಉದ್ಘಾಟನೆ

01:22 AM Mar 29, 2019 | Team Udayavani |

ಉಡುಪಿ: ಅನ್ನಬ್ರಹ್ಮನೆಂದು ಪ್ರಸಿದ್ಧನಾದ ಉಡುಪಿ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಸುವರ್ಣಗೋಪುರ ಸಮರ್ಪಣಾಂಗ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯುವ ಐತಿಹಾಸಿಕ ಮಹೋತ್ಸವದಲ್ಲಿ ಆಗಮಿಸುವ ಭಕ್ತರಿಗೆ ಅನ್ನದಾನದ ವ್ಯವಸ್ಥೆ ಆಯೋಜಿತವಾಗಿದ್ದು ಇದರ ಅಂಗವಾಗಿ ಧಾನ್ಯ ಸಮರ್ಪಣ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಉದ್ಘಾಟಿಸಿದರು.

Advertisement

ಒಬ್ಬ ಮನುಷ್ಯನಿಗೆ ಅಥವಾ ಜೀವಿಗೆ ಇರುವ ಹಸಿವನ್ನು ನೀಗಿಸಲು ಅನ್ನದಾನ ಮಾಡಿದರೆ ಶ್ರೀಕೃಷ್ಣ ಪರಬ್ರಹ್ಮನಿಗೆ ಪೂರ್ಣ ಸಂತೃಪ್ತಿಯಾಗುವುದು. ನಮ್ಮ ನಮ್ಮ ಮನೆಗಳಲ್ಲಿ ನಿತ್ಯ ಅನ್ನದಾನ ಮಾಡಲಾಗದೆ ಇದ್ದಲ್ಲಿ ಇಂತಹ ಅಪೂರ್ವ ಪರ್ವಕಾಲದಲ್ಲಿ ಬರುವ ಭಕ್ತರಿಗೆ ತೃಪ್ತಿಯನ್ನುಂಟು ಮಾಡುವ ಅನ್ನದಾನದಲ್ಲಿ ನಾವೂ ಪಾಲ್ಗೊಳ್ಳಲು ನಮ್ಮ ನಮ್ಮ ಶಕ್ತಿಗನುಗುಣವಾಗಿ ಧಾನ್ಯವನ್ನು ಸಮರ್ಪಿಸಬಹುದು. ಜನತಾ ಸೇವೆ ಜತೆಗೆ ಜನಾರ್ದನನಾದ ಶ್ರೀಕೃಷ್ಣನ ಸೇವೆಯೂ ಆಗುವುದು. ಶ್ರೀಕೃಷ್ಣ ಮಠದಲ್ಲಿರುವ ನವಗ್ರಹ ಗುಡಿಯ ಬಳಿಯಿರುವ ಧಾನ್ಯ ಸಂಗ್ರಹ ಪಾತ್ರೆಯಲ್ಲಿ ತಮ್ಮ ಶಕ್ತಿಗನುಗುಣವಾಗಿ ಧಾನ್ಯವನ್ನು ಸಮರ್ಪಿಸಬಹುದೆಂದು ಸ್ವಾಮೀಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next