Advertisement

ಉಡುಪಿ: ಸರಳ ಸಪ್ತೋತ್ಸವ ಶುಭಾರಂಭ

02:14 AM Jan 10, 2022 | Team Udayavani |

ಉಡುಪಿ: ಸರಕಾರದ ಕೋವಿಡ್‌ ಶಿಷ್ಟಾಚಾರದಂತೆ ಸರಳವಾಗಿ ಸೀಮಿತ ಭಕ್ತರ ಸಮ್ಮುಖ ಶ್ರೀಕೃಷ್ಣಮಠದಲ್ಲಿ ರವಿವಾರ ಅದಮಾರು ಮಠ ಪರ್ಯಾಯದ ಕೊನೆಯ ವಾರ್ಷಿಕ ಸಪ್ತೋತ್ಸವವು ಪರ್ಯಾಯ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪೀಠಸ್ಥ ಶ್ರೀಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶುಭಾರಂಭಗೊಂಡಿತು.

Advertisement

ಈ ಬಾರಿ ಪರ್ಯಾಯ ಮಠದಿಂದ ವಾಡಿಕೆಯ ಉತ್ಸವವಲ್ಲದೆ, ಎಂಟು ಸೇವಾಕರ್ತರ ಉತ್ಸವಗಳಿವೆ. ಇವರಲ್ಲಿ ಮೂವರು ಕರ್ಫ್ಯೂ ಕಾರಣದಿಂದ ಬರಲಿಲ್ಲ. ಇವರ ಬದಲು ಮಠದ ವ್ಯವಸ್ಥಾಪಕರೇ ಸೇವೆಯನ್ನು ನಡೆಸುತ್ತಿದ್ದಾರೆ.
ರಥೋತ್ಸವಕ್ಕೆ ಮೊದಲು ತೆಪ್ಪೋತ್ಸವ ನಡೆಯಿತು.

ತೆಪ್ಪವನ್ನು ವಿಶ್ವಾರ್ಪಣಂ ಬ್ಯಾಕ್‌ಗ್ರೌಂಡ್‌ನಿಂದ ಅಲಂಕರಿಸಲಾಗಿತ್ತು. ಆ ಬಳಿಕ ಗರುಡ ರಥ ಮತ್ತು ಮಹಾಪೂಜೆ ರಥಗಳ ಉತ್ಸವ ನಡೆಯಿತು. ಗರುಡ ರಥದಲ್ಲಿ ಶ್ರೀಕೃಷ್ಣ – ಮುಖ್ಯಪ್ರಾಣ, ಇನ್ನೊಂದು ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನಗಳ ಉತ್ಸವ ಮೂರ್ತಿಯನ್ನು ಇರಿಸಿ ಪೂಜಿಸಲಾಯಿತು. ಎರಡೂ ರಥ ಗಳಗಾಲಿ ಶಿಥಿಲವಾಗಿದ್ದು ಗಾಲಿಯನ್ನು ಹೊಸತಾಗಿ ರಚಿಸಲಾಗಿದೆ.

ವರ್ಷದ 6 ತಿಂಗಳೂ ರಥೋತ್ಸವ ನಡೆಯುವುದರಿಂದ ಗಾಲಿಗಳ ರಕ್ಷಣೆಗಾಗಿ ಸೋಲ್‌ ಅಳವಡಿಸಲಾಗಿದೆ. ದುರಸ್ತಿ ಗೊಳಿಸಿದ ರಥದಲ್ಲಿ ಮೊದಲ ಬಾರಿ ಉತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next