Advertisement

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

12:32 AM Sep 27, 2023 | Team Udayavani |

ಮಣಿಪಾಲ: ಜೀವನದಲ್ಲಿ ಜಿಗುಪ್ಸೆಗೊಂಡು ಮಣಿಪಾಲದ ನಾರಾಯಣ (56) ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಉಡುಪಿಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಕುಕ್ಕಿಕಟ್ಟೆಯ ನಿವಾಸಿ ಪ್ರಶಾಂತ (23) ಸೆ.26ರಂದು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನಾರೋಗ್ಯ: ಸಾವು
ಉಡುಪಿ: ಅನಾರೋಗ್ಯದಿಂದ ಬಳಲುತ್ತಿದ್ದ ಹೂವಪ್ಪ (22) ಸಾವನ್ನಪ್ಪಿದ್ದಾರೆ.

ಉಡುಪಿಯ ಹೊಟೇಲ್‌ನಲ್ಲಿ ಕ್ಲಿನಿಂಗ್‌ ಕೆಲಸ ಮಾಡಿಕೊಂಡಿದ್ದ ಇವರಿಗೆ ಸೆ. 24ರಂದು ಜ್ವರ ಮತ್ತು ಕಾಲು ನೋವು ಬಂದಿತ್ತು. ಔಷಧ ನೀಡಿದ್ದರೂ ಜ್ವರ ಕಡಿಮೆಯಾಗದ ಕಾರಣ ಹೊಟೇಲ್‌ ಮಾಲಕರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಬಳಿಕ ಅಲ್ಲಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಅಲ್ಲಿಂದ ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದಾರೆ.

ಕಾರು ಢಿಕ್ಕಿ: ಗಾಯ
ಉಡುಪಿ: ಮಲ್ಪೆ ಕಡೆಗೆ ಹೋಗುವ ಕಾರು ಢಿಕ್ಕಿ ಹೊಡೆದು ಪೋಸ್ಟ್‌ಮ್ಯಾನ್‌ ಮೂಡುಬೆಟ್ಟಿನ ನಾಗರಾಜ್‌ (26) ಗಾಯಗೊಂಡ ಘಟನೆ ನಡೆದಿದೆ. ಅವರು ಶಿರಿಬೀಡು ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next