Advertisement

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

10:01 PM Apr 19, 2024 | Team Udayavani |

ಉಡುಪಿ: ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ಶುಕ್ರವಾರ ನಡೆದಿದೆ.

Advertisement

ಅಂಬಾಗಿಲು – ಉಡುಪಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಟಿಪ್ಪರ್ ನ ಅಡಿ ಭಾಗಕ್ಕೆ ಬೈಕ್ ಬಿದ್ದಿದೆ.

ಮೃತ ದುರ್ದೈವಿ ಬೈಕ್ ಸವಾರ ಬ್ರಹ್ಮಾವರದ ಮಟಪಾಡಿಯ ಯಕ್ಷಗಾನ ಹವ್ಯಾಸಿ ರಂಗದ ಖ್ಯಾತ ಕಲಾವಿದ ಮಟಪಾಡಿ ಪ್ರಭಾಕರ್ ಆಚಾರ್ಯ(63) ಎಂದು ಗುರುತಿಸಲಾಗಿದೆ.  ಅವರು ಪೆರಂಪಳ್ಳಿ ಕಡೆಯಿಂದ ಅಂಬಾಗಿಲು ಮುಖ್ಯ ರಸ್ತೆಗೆ ಬರುತಿದ್ದರು.

ಬೈಕ್ ನಲ್ಲಿದ್ದ ಸಹಸವಾರ ತೀವ್ರ ರೀತಿಯಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಭಜನೆ ಗಾಯಕರಾಗಿಯೂ ಜನಪ್ರಿಯರಾಗಿದ್ದ ಪ್ರಭಾಕರ ಆಚಾರ್ಯ ಹಾಸ್ಯ ಸೇರಿ ವಿವಿಧ ವೇಷಗಳಲ್ಲಿ ಪ್ರಸಿದ್ದರಾಗಿದ್ದರು. ಹವ್ಯಾಸಿ ರಂಗದಲ್ಲಿ ತನ್ನದೇ ಆದ ಛಾಪು ಒತ್ತಿದ್ದರು. ವೃತ್ತಿ ಕಲಾವಿದರಿಗೂ ಮಿಗಿಲೆನಿಸುವ ಪ್ರತಿಭೆ ಅವರಲ್ಲಿ ಇತ್ತು. ಮಟಪಾಡಿ ನಂದಿಕೇಶ್ವರ ಯಕ್ಷಗಾನ ಸಂಘದ ಅಧ್ಯಕ್ಷರಾಗಿದ್ದರು. ಪತ್ನಿ ವಸಂತಿ, ಮಕ್ಕಳಾದ ಸುಬ್ರಹ್ಮಣ್ಯ,  ಸುಕನ್ಯಾ, ಸುಮನಾ ಆಚಾರ್ಯ ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಯಕ್ಷಗಾನ ರಂಗದ ಕಲಾವಿದರು ಸೇರಿ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಅಂತ್ಯ ಸಂಸ್ಕಾರ ಏ 20 ರಂದು ಮಧ್ಯಾಹ್ನ 2 ಗಂಟೆಗೆ ಮಟಪಾಡಿಯಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next