Advertisement

Udupi: ಪ್ರಮೋದ್‌ ಮಧ್ವರಾಜ್‌ ಹುಟ್ಟುಹಬ್ಬ: ಕುಂದಾಪುರದಲ್ಲಿ ಅ.17ಕ್ಕೆ ರಕ್ತದಾನ ಶಿಬಿರ

12:42 AM Oct 16, 2024 | Team Udayavani |

ಉಡುಪಿ: ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ಹುಟ್ಟುಹಬ್ಬ ಅ. 17ರಂದು ನಡೆಯಲಿದ್ದು, ಆ ಪ್ರಯುಕ್ತ ಕುಂದಾಪುರ ಪ್ರಮೋದ್‌ ಮಧ್ವರಾಜ್‌ ಅಭಿಮಾನಿ ಬಳಗ, ಉಡುಪಿ ಅಭಯಹಸ್ತ ಚಾರಿಟೆಬಲ್‌ ಟ್ರಸ್ಟ್‌, ಕುಂದಾಪುರ ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿಯ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಬೆಳಗ್ಗೆ 9ರಿಂದ ಕುಂದಾಪುರ ಹೊಸ ಬಸ್‌ ನಿಲ್ದಾಣದ ಬಳಿಯ ರೋಟರಿ ಭವನದಲ್ಲಿ ಜರಗಲಿದೆ.

Advertisement

ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿರುವರು. ಶಾಸಕ ಎ. ಕಿರಣ್‌ ಕುಮಾರ್‌ ಕೊಡ್ಗಿ, ಗೀತಾನಂದ ಫೌಂಡೇಶನ್‌ನ ಅಧ್ಯಕ್ಷ ಆನಂದ ಸಿ. ಕುಂದರ್‌, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನ್‌ದಾಸ್‌ ಶೆಣೈ, ಸರಕಾರಿ ಆಸ್ಪತ್ರೆಯ ಫಿಜಿಶಿಯನ್‌ ಡಾ| ನಾಗೇಶ್‌, ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿಯ ಸಭಾಪತಿ ಜಯಕರ್‌ ಶೆಟ್ಟಿ, ಆನಗಳ್ಳಿ ದತ್ತಾಶ್ರಮ ಮಠದ ಪ್ರವರ್ತಕಿ ಫೆರ್ಮಿನಾ ಸುಭಾಷ್‌ ಪೂಜಾರಿ, ಡಾ| ವೇ| ಮೂ| ಗಾಯತ್ರಿ ಚೆನ್ನಕೇಶವ ಭಟ್‌ ಆನಗಳ್ಳಿ, ಅಭಯಹಸ್ತ ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಸತೀಶ್‌ ಸಾಲ್ಯಾನ್‌ ಮಣಿಪಾಲ್‌, ಹಂಗಳೂರು ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ರೊವನ್‌ ಡಿ’ಕೋಸ್ತಾ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next