Advertisement

ಉಡುಪಿ: ಖ್ಯಾತ ಛಾಯಾಚಿತ್ರಗಾರ ಎಂ.ಜಿ.ರಾವ್ ಇನ್ನಿಲ್ಲ 

02:42 PM Aug 20, 2017 | |

ಉಡುಪಿ: ಖ್ಯಾತ ಛಾಯಾಚಿತ್ರಗಾರ, ವಾಸ್ತು ತಜ್ಞ ಎಂ.ಜಿ.ರಾವ್ ಇಂದು ಭಾನುವಾರ ಸ್ವಗೃಹದಲ್ಲಿ ಹೃದಯಾಘಾತ ದಿಂದ ನಿಧನ ಹೊಂದಿದರು. ಅವರಿಗೆ 69 ವರ್ಷವಾಗಿತ್ತು.

Advertisement

ಡಿಪ್ಲೊಮಾ ಪದವೀಧರರಾದ ರಾವ್‌ ಛಾಯಾಚಿತ್ರ ಕ್ಷೇತ್ರದಲ್ಲಿ 35 ವರ್ಷಗಳ ಕಾಲ ವಿಶೇಷ ಸೇವೆ ಸಲ್ಲಿಸಿ ಹೆಸರುವಾಸಿಯಾಗಿದ್ದರು.ಅವರ ಛಾಯಾಚಿತ್ರಗಳು  ತರಂಗ ವಾರ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು.

 ಮೃತರು ಪತ್ನಿ, ಪುತ್ರಿ ಹಾಗೂ ಸಹೋದರ,ಸಹೋದರಿಯನ್ನು ಅಗಲಿದ್ದಾರೆ. ರಾವ್‌ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next