Advertisement

ಉಡುಪಿ: ತರಂಗ ವಾರಪತ್ರಿಕೆಯಿಂದ ಕಂಗೊಳಿಸುತ್ತಿದೆ ನ್ಯೂಸ್‌ ಏಜೆನ್ಸಿ ಮಳಿಗೆ

05:55 PM Jan 11, 2024 | Team Udayavani |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಜ. 18ರಂದು ಸರ್ವಜ್ಞ ಪೀಠಾರೋಹಣ ಮಾಡಲಿರುವ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಅವರ ಶಿಷ್ಯರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಭಾವಚಿತ್ರದ ಮುಖಪುಟದೊಂದಿಗೆ ಪರ್ಯಾಯದ ಸಮಗ್ರ ಮಾಹಿತಿಯನ್ನು ಒಳಗೊಂಡ ಸಂಗ್ರಹ ಯೋಗ್ಯವಾದ ತರಂಗ ವಾರಪತ್ರಿಕೆಯನ್ನು ಆಕರ್ಷಕ ವಾಗಿ ಜೋಡಿಸಿ ಪ್ರದರ್ಶಿಸುವ ಮೂಲಕ ಜನರನ್ನು ಆಕರ್ಷಿಸುತ್ತಿದೆ ಶ್ರೀಕೃಷ್ಣ ಮಠದ ರಥಬೀದಿಯಲ್ಲಿರುವ
ಎನ್‌.ಎಸ್‌. ನ್ಯೂಸ್‌ ಏಜೆನ್ಸಿ ಮಳಿಗೆ.

Advertisement

ಪೇಜಾವರ ಮಠದ ಎದುರಿನಲ್ಲಿ ಸಗ್ರಿ ಗೋಪಾಲ ನಾಯಕ್‌ ಅವರಿಂದ ಆರಂಭಿಸಲ್ಪಟ್ಟು, ಸಗ್ರಿ ಗೋವಿಂದ ನಾಯಕ್‌ ಅವರಿಂದ ಮುಂದುವರಿಸಿ ಕೊಂಡು ಬಂದು, ಈಗ ಸಗ್ರಿ ಗೋಕುಲದಾಸ ನಾಯಕ್‌ ಮತ್ತು ಸಗ್ರಿ ನರಸಿಂಹ ನಾಯಕ್‌ ಸಹೋದರರ
ಮಾಲಕತ್ವದ ಈ ಮಳಿಗೆಯಲ್ಲಿ ಉದಯವಾಣಿ, ತರಂಗ, ರೂಪತಾರಾ, ತುಷಾರ ಸಹಿತ ಇನ್ನಿತರ ಎಲ್ಲ ಪತ್ರಿಕೆಗಳು, ಪಂಚಾಂಗ, ಡೈರಿಗಳು ದೊರೆಯಲಿವೆ.

ಪ್ರತೀ ಪರ್ಯಾಯ ಮತ್ತು ವಿಶೇಷ ಸುದ್ದಿಗಳು ಪ್ರಕಟಗೊಂಡ ಸಂದರ್ಭಗಳಲ್ಲಿ ಮಳಿಗೆಯಲ್ಲಿ ಪ್ರದರ್ಶನ ಮಾಡುತ್ತೇವೆ. ಹೀಗೆ ಪ್ರದರ್ಶನ ಮಾಡುವುದರಿಂದ ಅತೀ ಹೆಚ್ಚು ಮಾರಾಟವಾಗುವುದಲ್ಲದೆ ದೂರದ ಯಾತ್ರಿಕರು ಇತ್ತ ಕಡೆ ಗಮನ ಹರಿಸುತ್ತಾರೆ ಎಂದು ಸಗ್ರಿ ಗೋಕುಲ್‌ ದಾಸ್‌ ನಾಯಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next