Advertisement

ನಗರಸಭೆಯ ಸ್ಥಾಯೀ ಸಮಿತಿಯ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

12:21 AM Jan 15, 2023 | Team Udayavani |

ಉಡುಪಿ: ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಮೂಡುಬೆಟ್ಟು ವಾರ್ಡಿನ ಸದಸ್ಯರಾದ ಶ್ರೀಶ ಕೊಡವೂರು ಸ್ಥಾಯಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಅಯ್ಕೆಯಾದರು. ಸಭೆಯ ಅಧ್ಯಕ್ಷತೆ ವಹಿಸಿದ ಸುಮಿತ್ರಾ ನಾಯಕ್‌ ಅವರ ಸಮುಖದಲ್ಲಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು.

Advertisement

ನಗರಸಭೆಯ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ, ಎಇಇ ಯಶವಂತ ಪ್ರಭು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಾಹಿಸಿದರು. ಸ್ಥಾಯಿ ಸಮಿತಿ ಸದಸ್ಯರಾದ ಸಂಪಾವತಿ, ಸಂತೋಷ ಜತ್ತನ್‌, ಯೋಗೀಶ್‌ ಸಾಲ್ಯಾನ್‌, ಮಾನಸಾ ಸಿ. ಪೈ, ಭಾರತಿ ಪ್ರಶಾಂತ್‌, ಜಯಂತಿ ಕೆ. ಪೂಜಾರಿ, ಕಲ್ಪನಾ ಸುಧಾಮ, ಅಶ್ವಿ‌ನಿ ಅರುಣಾ ಪೂಜಾರಿ, ಅಮೃತಾ ಕೃಷ್ಣಮೂರ್ತಿ ಆಚಾರ್ಯ ಹಾಗೂ ನಗರಸಭೆಯ ಸರ್ವ ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next