Advertisement

Udupi ಎಲ್‌ವಿಟಿ: ಶಾರದಾ ಮಾತೆಯ ಶೋಭಾಯಾತ್ರೆ

11:25 PM Oct 25, 2023 | Team Udayavani |

ಉಡುಪಿ: ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಪೂಜಿತ ಶಾರದಾ ದೇವಿಗೆ ಅರ್ಚಕ ವಿನಾಯಕ ಭಟ್‌ ಮಹಾ ಮಂಗಳಾರತಿ ಬೆಳಗಿಸಿ, ಶೋಭಾಯಾತ್ರೆಗೆ ಚಾಲನೆ ನೀಡಿದರು.

Advertisement

ದೇವಾಲಯದಿಂದ ಹೊರಟ ಉತ್ಸವ ಐಡಿಯಲ್‌ ಸರ್ಕಲ್‌, ಡಯಾನಾ ಸರ್ಕಲ್‌, ತ್ರಿವೇಣಿ ಸರ್ಕಲ್‌, ಚಿತ್ತರಂಜನ್‌ ಸರ್ಕಲ್‌, ಕೊಳದಪೇಟೆ ಮೂಲಕ ಬಂದು ದೇಗುಲದ ಪದ್ಮ ಸರೋವರದಲ್ಲಿ ಮೂರ್ತಿಯ ವಿಸರ್ಜನೆ ಮಾಡಲಾಯಿತು.

ಉಡುಪಿ ನಗರವನ್ನು ತಳಿರುತೋರಣ, ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಕೀಲು ಕುದುರೆ, ತಟ್ಟಿàರಾಯ, ಸ್ತಬ್ಧ ಚಿತ್ರಗಳಾದ ವೆಂಕಟರಮಣ, ಶ್ರೀದೇವಿ, ಚೆಂಡೆ ಮೇಳ, ಟಸ್ಸಲೆ ಮಂಗಳ ವಾದ್ಯ ಮುಂತಾದ ಜನಾಕರ್ಷಕ ಟ್ಯಾಬ್ಲೊಗಳೊಂದಿಗೆ ಉಡುಪಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬಂತು.
ದೇಗುಲದ ಆಡಳಿತ ಮೊಕ್ತೇಸರರಾದ ಪಿ.ವಿ. ಶೆಣೈ, ವಸಂತ್‌ ಕಿಣಿ, ವಿಶ್ವನಾಥ ಭಟ್‌, ಪುಂಡಲೀಕ ಕಾಮತ್‌, ಗಣೇಶ ಕಿಣಿ, ಅಶೋಕ ಬಾಳಿಗಾ, ದಯಘನ್‌ ಭಟ್‌, ದಿವಾಕರ ಭಟ್‌, ದೀಪಕ್‌ ಭಟ್‌, ಗಿರೀಶ ಭಟ್‌, ನರಹರಿ ಪೈ, ವಿಶಾಲ್‌ ಶೆಣೈ, ಉಮೇಶ್‌ ಪೈ, ಶಾಮ್‌ ಪ್ರಸಾದ್‌ ಕುಡ್ವಾ, ನಿತೇಶ, ನಾಗೇಶ್‌ ಪ್ರಭು, ಮಟ್ಟಾರು ಸತೀಶ್‌ ಕಿಣಿ, ಭಾಸ್ಕರ್‌ ಶೆಣೈ, ವಿವೇಕ ಶೆಣೈ, ಶಾಸಕ ಯಶ್‌ಪಾಲ್‌ ಎ. ಸುವರ್ಣ, ಕಾಂಗ್ರೆಸ್‌ ನಾಯಕ ಅಮೃತ್‌ ಶೆಣೈ ಪಿ. ಮತ್ತು ಆಡಳಿತ ಮಂಡಳಿಯ ಸದಸ್ಯರು, ಜಿಎಸ್‌ಬಿ ಯುವಕ ಮಂಡಳಿ, ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next