Advertisement

ಹಿಜಾಬ್‌ ಪ್ರಕರಣ: ಉಡುಪಿ ಜಿಲ್ಲಾಡಳಿತ ವೈಫ‌ಲ್ಯವಲ್ಲ: ಸಚಿವ ಅಂಗಾರ

01:14 AM Feb 09, 2022 | Team Udayavani |

ಉಡುಪಿ: ಹಿಜಾಬ್‌ ಪ್ರಕರಣವನ್ನು ವಿವಾದವಾಗಿಸಿ ರಾಜಕೀಯ ಲಾಭ ಪಡೆಯುವ ಆವಶ್ಯಕತೆ ಬಿಜೆಪಿಗೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಎಸ್‌. ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಜನರ ನಡುವೆ ಸಂಘರ್ಷ ಹುಟ್ಟು ಹಾಕಿ ರಾಜಕೀಯ ಲಾಭ ಪಡೆಯುವ ಅಗತ್ಯ ಬಿಜೆಪಿಗೆ ಇಲ್ಲ. ಜಿಲ್ಲೆಯಲ್ಲಿ ಹಿಜಾಬ್‌ ವಿವಾದ ಹೆಚ್ಚುವುದಕ್ಕೆ ಜಿಲ್ಲಾಡಳಿತ ವೈಫಲ್ಯ ಕಾರಣವಲ್ಲ ಎಂದರು.

ಒಂದೊಂದು ಕಾಲೇಜಿಗೆ ಒಂದೊಂದು ನಿಯಮ ಜಾರಿ ಮಾಡುವುದಕ್ಕೆ ಆಗುವುದಿಲ್ಲ ಎಂದರು. ಕೋರ್ಟ್‌ ಆದೇಶ ಪಾಲಿಸಲಿದ್ದೇವೆ ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

ಇದನ್ನೂ ಓದಿ:ಹಿಜಾಬ್‌ ಪ್ರಕರಣದ ಹಿಂದಿನ ಶಕ್ತಿಗಳ ಬಗ್ಗೆ ತನಿಖೆ : ಆರಗ ಜ್ಞಾನೇಂದ್ರ

ಸಮವಸ್ತ್ರ ಒಪ್ಪಿದ್ದ ವಿದ್ಯಾರ್ಥಿನಿಯರು: ಶಾಸಕ ಭಟ್‌
ಉಡುಪಿ: ಹಿಜಾಬ್‌ ವಿವಾದಕ್ಕೆ ಸಂಬಂಧಿಸಿ ಆರಂಭದಲ್ಲಿ ವಿವಾದ ಹುಟ್ಟಿಕೊಂಡ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ವಸ್ತ್ರ ಸಂಹಿತೆ ನಿಯಮಕ್ಕೆ ಒಪ್ಪಿಗೆ ನೀಡಿರುವ ದಾಖಲೆಗಳನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಕೆ. ರಘುಪತಿ ಭಟ್‌ ಬಿಡುಗಡೆಗೊಳಿಸಿದ್ದಾರೆ.

Advertisement

ಕಾಲೇಜಿಗೆ ದಾಖಲಾಗುವ ವೇಳೆ ಕಾಲೇಜು ಸಮವಸ್ತ್ರ ಕಡ್ಡಾಯ ಅಂಶವಿರುವ ನಿಯಮಾವಳಿ ಪಾಲನೆ ತಿಳುವಳಿಕೆ ಪತ್ರ ಸಹಿ ಹಾಕಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next