Advertisement

Udupi ದೂರುದಾರನ ಮನೆಯಲ್ಲೂ ತಲವಾರು ಪತ್ತೆ; ವಶಕ್ಕೆ

10:52 PM Jun 22, 2024 | Team Udayavani |

ಉಡುಪಿ: ಉಡುಪಿ ಪುತ್ತೂರಿನ ಬಿರಿಯಾನಿ ಪಾಯಿಂಟ್‌ ಬಳಿ ನಡೆದ ತಲವಾರು ದಾಳಿ ಪ್ರಕರಣದಲ್ಲಿ ಹಲ್ಲೆಗೊಳಗಾಗಿ ದೂರು ನೀಡಿದ್ದ ಉಡುಪಿ ಪುತ್ತೂರಿನ ಚರಣ್‌ (18) ಎಂಬಾತನ ಮನೆಯಲ್ಲೂ ಮಾರಕಾಯುಧ ತಲವಾರು ಇರುವುದನ್ನು ಪತ್ತೆಹಚ್ಚಿರುವ ಪೊಲೀಸರು ತಲವಾರು ಸಹಿತ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಆತನ ಮನೆಯಲ್ಲಿ ಮಾರಕಾಯುಧ ಇರುವ ಬಗ್ಗೆ ಉಡುಪಿ ನಗರ ಠಾಣೆಯ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಅದರಂತೆ ಜೂ. 21ರಂದು ನ್ಯಾಯಾಲಯದಿಂದ ಸರ್ಚ್‌ ವಾರಂಟ್‌ ಪಡೆದುಕೊಂಡು ಮನೆಯಲ್ಲಿ ಶೋಧ ನಡೆಸಿದಾಗ ತಲವಾರು ದೊರೆತಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next