Advertisement

ಮುಳುಗಡೆಯ ಭೀತಿಯಲ್ಲಿ ಉಡುಪಿ ಗುಂಡಿಬೈಲು: ಸಂಕಷ್ಟದಲ್ಲಿ ಸ್ಥಳೀಯರು

09:19 AM Jul 24, 2019 | keerthan |

ಉಡುಪಿ: ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಉಡುಪಿಯ ಗುಂಡಿಬೈಲು ಪ್ರದೇಶ ಮುಳುಗಡೆಯ ಭೀತಿ ಎದುರಿಸುತ್ತಿದೆ. ಪ್ರದೇಶದ ಮನೆಗಳು, ವಲಸೆ ಕಾರ್ಮಿಕರ ಜೋಪಡಿಗಳ ಒಳಗೆ ನೀರು ನುಗ್ಗಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.

Advertisement

ಗುಂಡಿಬೈಲು ಪ್ರದೇಶದಲ್ಲಿ ತೋಡೊಂದು ತುಂಬಿ ಹರಿಯುತ್ತಿದ್ದು, ಅದರಿಂದಾಗಿ ನೆರೆ ಉಂಟಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದು, ಸ್ಥಳೀಯ ಬೃಹತ್‌ ಕಟ್ಟಡಗಳ ನೀರು ಕೂಡಾ ಇದೇ ಪ್ರದೇಶಕ್ಕೆ ಹರಿಯುತ್ತಿದೆ.

ಈ ಕೆಸರು ನೀರು ಶೇಖರಣೆಯಿಂದ ತೊಂದರೆಗೆ ಒಳಗಾಗುತ್ತಿದ್ದು, ಜಿಲ್ಲಾಡಳಿತ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತರಿದ್ದಾರೆ.

 

Advertisement

ಆತಂಕದಲ್ಲಿ ವೃದ್ಧ ದಂಪತಿ: ಗುಂಡಿಬೈಲು ಪ್ರದೇಶದಲ್ಲಿ ವಿಕ್ಟರ್‌ ದಂಪತಿಗಳು ವಾಸವಾಗಿದ್ದು, ಅವರ ಮನೆಯ ಜಗಲಿ ಮುಳುಗಡೆಯಾಗುವ ಹಂತಕ್ಕೆ ನೀರು ಬಂದಿದೆ. 85 ವರ್ಷದ ವಿಕ್ಟರ್‌ ಮತ್ತು ಪತ್ನಿ ಮಾತ್ರ ಮನೆಯಲ್ಲಿ ವಾಸವಿದ್ದು, ಮನೆಯ ಸುತ್ತ ನೀರು ನಿಂತಿರುವುದರಿಂದ ಆತಂಕಕ್ಕೀಡಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next