Advertisement

Udupi: ಆ.25ರಂದು ಜಿಎಸ್ ಬಿ ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ

04:37 PM Aug 21, 2024 | Team Udayavani |

ಉಡುಪಿ: ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ(ರಿ) ಉಡುಪಿ ಜಿಲ್ಲೆ ಮತ್ತು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.) ಮುದರಂಗಡಿ, ಇವರ ಸಹಭಾಗಿತ್ವದಲ್ಲಿ ಜಿಎಸ್ ಬಿ ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆ, ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಇದೇ ಬರುವ ಆದಿತ್ಯವಾರ(ಆಗಸ್ಟ್ 25) ದಂದು ಉಡುಪಿ ಅಂಬಾಗಿಲಿನಲ್ಲಿರುವ “ಅಮೃತ ಗಾರ್ಡನ್ ಸಭಾಭವನ”ದಲ್ಲಿ ಜರುಗಲಿದೆ.

Advertisement

ಪುತ್ತೂರಿನ ಆನಂದಾಶ್ರಮ ಸೇವಾ ಟ್ರಸ್ಟ್ (ರಿ.),ಇದರ ಸಂಸ್ಥಾಪಕರಾದ ಡಾ.ಪಿ.ಗೌರಿ ಪೈಯವರು ಸಮಾರಂಭವನ್ನು ಉದ್ಘಾಟಿಸಲಿರುವರು, ಬೆಂಗಳೂರಿನ ಖ್ಯಾತ ಉದ್ಯಮಿ ಸೆಂಚುರಿ ರಿಯಲ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರು ಹಾಗೂ ವಿದ್ಯಾಶಿಲ್ಪ ಮತ್ತು ಬಿಎಮ್ಎಸ್ ಯೂನಿವರ್ಸಿಟಿ ಗಳು ಕುಲಪತಿಗಳಾದ ಡಾ .ಪಿ. ದಯಾನಂದ ಪೈ ಯವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ದೇಶದ ಪ್ರಖ್ಯಾತ ಕಾರ್ಪೊರೇಟ್ ಸಂಸ್ಥೆ “ಜೆರೋದ”ದ ಸಾಮಾಜಿಕ ಕಾರ್ಯಕರ್ತರು ಹಾಗೂ ದಾನಿಗಳಾದ ಬೆಂಗಳೂರಿನ ಶ್ರೀಮತಿ ರೇವತಿ ರಘುರಾಮ ಕಾಮತ್ ರವರು ” “ದಿಕ್ಸೂಚಿ ಭಾಷಣಗೈಯಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಪ್ರಖ್ಯಾತ ಆಭರಣ ಟೈಮ್ ಲೆಸ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಡಾ.ಪ್ರತಾಪ್ ಮಧುಕರ್ ಕಾಮತ್, ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಟ್ರಸ್ಟಿ ಶ್ರೀ ಎಂ.ಕಿರಣ್ ಪೈ, ದುಬೈಯಲ್ಲಿರುವ ಎನ್ ಆರ್ ಐ ಮನಿ ಕ್ಲಿನಿಕ್ ನ ಸಂಸ್ಥಾಪಕರಾದ ಡಾ. ಚಂದ್ರಕಾಂತ ಭಟ್, ಮಂಗಳೂರಿನ ಎಲ್ಕೋಡ್ ಟೆಕ್ನಾಲಜಿಸ್ ಸಂಸ್ಥೆಯ ಸಹ ಸಂಸ್ಥಾಪಕರು ಹಾಗೂ ಕಾರ್ಯನಿರ್ವಣಾಧಿಕಾರಿಗಳಾದ ಶ್ರೀ ರಾಜೇಂದ್ರ ಶೆಣೈ, ಮುಂಬೈಯ ಪ್ರಖ್ಯಾತ ಕಾಮತ್ ಅವರ್ಟೈಮ್ಸ್ ಐಸ್ ಕ್ರೀಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಗಿರೀಶ್ ರಮಾನಾಥ ಪೈ ಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

Advertisement

ಇದನ್ನೂ ಓದಿ: Kamala Harris ಭಾರತೀಯ ಮೂಲದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ WWE ಕುಸ್ತಿಪಟು

Advertisement

Udayavani is now on Telegram. Click here to join our channel and stay updated with the latest news.

Next