Advertisement

Udupi ಗೀತಾರ್ಥ ಚಿಂತನೆ 24; ಕೊನೆಗೂ ನಡೆಯುವುದು ಭಗವದಿಚ್ಛೆಯೇ…

01:29 AM Sep 02, 2024 | Team Udayavani |

ಗಂಡ, ಹೆಂಡತಿ, ಮಕ್ಕಳ ಸಂತೋಷಕ್ಕಾಗಿ ಏನೇನೋ ತ್ಯಾಗ ಮಾಡುತ್ತೇವೆ. ಒಂದು ದಿನ ಇದೆಲ್ಲವೂ ಮಾಡುವುದು ಬೇಡವಿತ್ತು ಎನಿಸುತ್ತದೆ. ಹೀಗೆ ಮಾಡುವುದಕ್ಕಿಂತ “ಭಗವತ್ಪ್ರೀತ್ಯರ್ಥಂ’ ಎಂದು ಮಾಡಬೇಕು.

Advertisement

ಭಗವತ್ಪ್ರೀತಿ ಇಲ್ಲದಿದ್ದರೆ ಯಾವ ಪೂಜೆಯೂ ವ್ಯರ್ಥವೇ. ಕೊಲೆ ಮಾಡಿದವನನ್ನು ಜೈಲಿನಲ್ಲಿ ಗಲ್ಲಿಗೇರಿಸಲಾಗುತ್ತದೆ. ಮೊದಲು ಮಾಡಿದ್ದು ಕೊಲೆ, ಗಲ್ಲಿಗೇರಿಸುವುದೂ ಒಂದರ್ಥದಲ್ಲಿ ಅದುವೇ. ಎರಡೂ ಜೀವಾಪಹರಣವೇ. ಕೊಲೆ ಮಾಡುವವನಿಗೆ ದ್ವೇಷವಿತ್ತು ಮತ್ತು ಆತನಿಗೆ ಶಿಕ್ಷೆ ಇದೆ. ಗಲ್ಲಿಗೇರಿಸುವವ‌ನಿಗೆ ದ್ವೇಷವೇ ಇಲ್ಲ. ಈತನದು ಕೆಲಸವಷ್ಟೆ. ಗಲ್ಲಿಗೇರಿಸುವವನಿಗೆ ಆಕರ್ಷಕ ವೇತನವಿರುತ್ತದೆ. ಏಕೆಂದರೆ ಆ ಕೆಲಸಕ್ಕೆ ಯಾರೂ ಬರುವುದಿಲ್ಲ. ಪ್ರಳಯ ಕಾಲದಲ್ಲಿ ರುದ್ರದೇವರು ಇಡೀ ಜಗತ್ತನ್ನು ಸಂಹರಿಸುತ್ತಾರೆ. ಪರೀಕ್ಷೆ ಮುಗಿದ ಬಳಿಕ ಸಭಾಂಗಣದ ಬೆಳಕು ಆರಿಸಿದರೆ ಸರಿ. ಜಗತ್ತಿನ ವ್ಯವಸ್ಥೆ ಬೇಕೆಂದು ಭಗವಂತ ನಿರ್ಧರಿಸಿದರೆ ಬೇಕು, ಇನ್ನು ಮುಗಿಯಿತು ಪ್ರಳಯವಾಗಲಿ ಎಂದು ಇಚ್ಛಿಸಿದರೆ ಸಂಹಾರವೇ ಸರಿ. ಆತ ಲೋಕ ನಡೆಯಬೇಕೆಂದು ಇಚ್ಛಿಸಿದರೆ ಸಂಹರಿಸಲಾಗದು, ಮುಂದುವರಿಯಬಾರದೆಂದು ಆತ ಇಚ್ಛಿಸಿದರೆ ನಡೆಸಲು ಆಗದು. ಯಾರಾದರೂ ಸಾಯಬೇಕೆಂದು ಬಯಸುತ್ತಾರಾ? ಹಾಗಿದ್ದರೂ ಯಾರಾದರೂ ಸಾವಿನಿಂದ ಬಚಾವಾದದ್ದುಂಟೋ? ಇದಕ್ಕಾಗಿಯೇ ಹೇಳಿದ್ದು ಭಗವಂತ ಜಗತ್ತಿನೊಡೆಯನೆಂದು. ಆತನ ನಿರ್ಧಾರವೇ ಅಂತಿಮವಾಗಿ ನಡೆಯುವುದು.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

 

Advertisement
Advertisement

Udayavani is now on Telegram. Click here to join our channel and stay updated with the latest news.

Next