Advertisement

Fraud ಅಡಿಕೆ ವ್ಯಾಪಾರಿಗೆ 8.98 ಲ.ರೂ. ವಂಚನೆ

11:54 PM Jul 15, 2024 | Team Udayavani |

ಮಂಗಳೂರು: ನಗರದ ಅಡಿಕೆ ವ್ಯಾಪಾರಿ, ಯೂಸುಫ್ ಎಂಬವರಿಗೆ 8.98 ಲ.ರೂ. ವಂಚಿಸಿರುವ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇವರು ನಗರದ ಬೀಬಿ ಅಲಾಬಿ ರಸ್ತೆಯಲ್ಲಿ ಒಣ ಅಡಿಕೆ ವ್ಯಾಪಾರಿಯಾಗಿದ್ದು, ಗುಜರಾತ್‌ನ ಕಮಲೇಶ್‌ ಪಡಾಲಿಯಾ ಎಂಬಾತನಿಗೆ 72 ಮೂಟೆಗಳಲ್ಲಿ ತಲಾ 65 ಕೆ.ಜಿ.ಯಂತೆ 14,98,770 ರೂ.ಗಳಿಗೆ ಅಡಿಕೆ ಮಾರಾಟ ಮಾಡಿದ್ದರು. ಹಂತ ಹಂತವಾಗಿ 6 ಲ.ರೂ.ಗಳನ್ನು ಆರ್‌ಟಿಜಿಎಸ್‌ ಮೂಲಕ ಪಡೆದುಕೊಂಡಿದ್ದರು.

ಉಳಿದ 8,98,770 ರೂ.ಗಳನ್ನು ಪಾವತಿಸಿರಲಿಲ್ಲ. ಆತನ ಮೊಬೈಲ್‌ ಫೋನ್‌ ಸ್ವಿಚ್‌ ಆಫ್ ಆಗಿದೆ. ಆತನಿಗೆ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ನಲ್ಲಿ ಗೋದಾಮು ಇದ್ದು, ಅದನ್ನು ಮುಚ್ಚಲಾಗಿದೆ. ಆತನ ಗೋದಾಮಿ ನಲ್ಲಿದ್ದ ಸುಮಾರು 115 ಚೀಲ ಅಡಿಕೆಯನ್ನು ಆತನ ಸಂಬಂಧಿಕರಾದ ಭಗವಾನ ಜಿ. ಲಕ್ಷ್ಮೀದಾಸ್‌ ಹಿಂಸು ಮತ್ತು ದಿಲೀಪ್‌ ಕುಮಾರ್‌ ಲಕ್ಷ್ಮೀದಾಸ್‌ ಹಿಂಸು ಅವರ ಗೋದಾಮಿಗೆ ಹಸ್ತಾಂತರಿಸಿರುವುದು ಗೊತ್ತಾಗಿದೆ. ಪ್ರಸ್ತುತ ಮೂವರು ಕೂಡ ಗೋದಾಮನ್ನು ಮುಚ್ಚಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next