Advertisement
ಎ.16ರಂದು ಯುವಕನೋರ್ವ ಅಂಗಡಿಯಿಂದ ಸಮೋಸ ಖರೀದಿಸಿ ಅಲ್ಲಿಯೇ ತಿನ್ನಲಾರಂಭಿಸಿದರು.ಆಗ ಅವರ ಬಾಯಿಗೆ ಗಟ್ಟಿ ವಸ್ತು ತಗುಲಿ ನೋವಾಯಿತು.ಕೈ ಹಾಕಿ ನೋಡಿದಾಗ ಕಬ್ಬಿಣದ ಮೊಳೆ ಇರುವುದು ಗಮನಕ್ಕೆ ಬಂತು. ಆತ ಅಂಗಡಿಯವರನ್ನು ತರಾಟೆಗೆ ತೆಗೆದು ಕೊಂಡರು. ಅಂಗಡಿಯವರು “ನನಗೆ ಬೇರೆಯವರು ತಂದು ಕೊಡುವುದು. ನಾವು ಮಾಡುವುದಲ್ಲ’ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಮನೆಯಿಂದ ತಯಾರಿಸಿ ಮಾರಾಟ ಮಾಡುವ ಆಹಾರ ವಸ್ತು ಗಳ ಗುಣಮಟ್ಟ ಪರೀಕ್ಷಿಸುವ ಕೆಲಸ ಆಗಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಅವರು ಆಗ್ರಹಿಸಿದ್ದಾರೆ. ದೂರು ನೀಡಿ
ಇಂಥ ಪ್ರಕರಣಗಳ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಾಲೂಕು ಆಹಾರ ಸುರಕ್ಷಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.