Advertisement

ಉಡುಪಿ: ಅಟಲ್‌ ಉತ್ಸವದಲ್ಲಿ “ವಿಜಯ’ಗಾನದುಂದುಭಿ

10:24 AM Dec 27, 2022 | Team Udayavani |

ಉಡುಪಿ: ಅಟಲ್‌ ಉತ್ಸವದ ಪ್ರಯುಕ್ತ ಎಂಜಿಎಂ ಕ್ರೀಡಾಂಗಣದಲ್ಲಿ ರವಿವಾರದ ನಡೆದ ಬೂತ್‌ ಸಂಗಮದ ಬಳಿಕ ಗಾಯಕ ವಿಜಯ್‌ ಪ್ರಕಾಶ್‌ ಅವರ ಹಾಡುಗಳ ಕಾರ್ಯಕ್ರಮ “ವಿಜಯ’ ಗಾನದುಂದುಭಿ ರಂಜಿಸಿತು.

Advertisement

ಸೂಪರ್‌ ಹಿಟ್‌ ಪ್ರದರ್ಶನ ಕಂಡ ಕಾಂತಾರ ಸಿನೆಮಾದ ಸಿಂಗಾರ ಸಿರಿಯೇ ಹಾಡು…ಪುನೀತ್‌ ರಾಜ್‌ ಕುಮಾರ್‌ ಅಭಿನಯದ ರಾಜಕುಮಾರ ಸಿನೆಮಾದ ನೀನೇ ರಾಜಕುಮಾರ ಹಾಡುಗಳು ಜನರನ್ನು ಭಾವಪರವಶಗೊಳಿಸಿದವು. ಗಾಯಕಿ ಅನುರಾಧಾ ಭಟ್‌ ಸಾಥ್‌ ನೀಡಿದರು.

ಅಭಿಮಾನಿಗಳ ಸಂಭ್ರಮ ಗಾಯಕರ ಹಾಡಿಗೆ ಮನಸೋತ ಪ್ರೇಕ್ಷಕರು ವೇದಿಕೆಯ ಎದುರಿಗೆ ಬಂದು ಕುಣಿಯಲು ಆರಂಭಿಸಿದರು. ರವಿವಾರವಾದ ಕಾರಣ ಪ್ರೇಕ್ಷಕರ ಸಂಖ್ಯೆ ಅಧಿಕವಾಗಿತ್ತು. ವಿಜಯ ಪ್ರಕಾಶ್‌ ಅವರನ್ನು ಸಮ್ಮಾನಿಸಲಾಯಿತು.

ಶಾಸಕರಿಂದ “ಪ್ರೇಮದಕಾಣಿಕೆ’ ಹಾಡು

ರಸಮಂಜರಿಯಲ್ಲಿ ಶಾಸಕ ಕೆ. ರಘುಪತಿ ಭಟ್‌ ಮತ್ತು ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌ ಅವರು ವಿಜಯ ಪ್ರಕಾಶ್‌ ಅವರೊಂದಿಗೆ ಡಾ| ರಾಜ್‌ಕುಮಾರ್‌ ನಟನೆಯ ಪ್ರೇಮದ ಕಾಣಿಕೆ ಸಿನೆಮಾದ “ಬಾನಿಗೊಂದು ಎಲ್ಲೆ ಎಲ್ಲಿದೆ…’ ಹಾಡಿಗೆ ದನಿಗೂಡಿಸಿದರು. ಪ್ರೇಕ್ಷಕರಿಂದ ಕರತಾಡನ ಮೊಳಗಿತು. ಮೈಕ್‌ ಹಿಡಿದು ಬಹಳಷ್ಟು ಭಾಷಣ ಮಾಡಿದ್ದೇನೆ. ಆದರೆ ಹಾಡಿರುವುದು ಇದೇ ಮೊದಲು ಎಂದು ಶಾಸಕರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next