Advertisement

ಎಂಡೋ ಸಂತ್ರಸ್ತರಿಗೆ ಸೌಲಭ್ಯ ಒದಗಿಸಿ: ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌

01:10 AM Jan 20, 2022 | Team Udayavani |

ಉಡುಪಿ: ಎಂಡೋಸಲ್ಫಾನ್‌ ಪೀಡಿತರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವುದರ ಜತೆಗೆ ಸರಕಾರದ ಸೌಲಭ್ಯಗಳನ್ನು ತಲುಪಿಸಿ ಅವರ ಕುಂದು ಕೊರತೆಗಳಿಗೆ ಸ್ಪಂದಿಸುವ ಕಾರ್ಯವನ್ನು ಚಾಚೂ ತಪ್ಪದೆ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಸೂಚಿಸಿದರು.

Advertisement

ಜಿ.ಪಂ. ಸಭಾಂಗಣದಲ್ಲಿ ಎಂಡೋ ಸಂತ್ರಸ್ತರ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಂಡೋಸಲ್ಫಾನ್‌ನಿಂದ ಕೆಲವರುಶಾಶ್ವತ ಅಂಗವೈಕಲ್ಯ ಹೊಂದಿದರೆ, ಕೆಲವರು ಕ್ಯಾನ್ಸರ್‌, ಅಸ್ತಮಾ, ಚರ್ಮರೋಗ, ಅಪಸ್ಮಾರ ಮೊದಲಾದವುಗಳಿಗೆ ತುತ್ತಾಗು ತ್ತಿದ್ದಾರೆ. ಅವರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ಜತೆಗೆ ಸರಕಾರದ ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ರಾಜ್ಯಮಟ್ಟದ ಮಂಡಳಿಗೆ ಶಿಫಾರಸು
ಎಂಡೋ ಬಾಧಿತ ಪ್ರದೇಶಗಳಲ್ಲಿ ಇತರ ಕಾಯಿಲೆಗಳು ಇದರಿಂದಲೇ ಉಂಟಾಗಿ ದೆಯೇ ಎಂಬ ಬಗ್ಗೆ ಸರ್ವೇ ಮಾಡಿಸುವುದರೊಂದಿಗೆ ಅಂಗವಿಕಲರಿಗೆ ನೀಡುವ ಸೌಲಭ್ಯಗಳನ್ನು ಒದಗಿಸುವ ಕುರಿತು ರಾಜ್ಯಮಟ್ಟದ ಮಂಡಳಿಗೆ ಶಿಫಾರಸು ಮಾಡಲು ಸೂಚನೆ ನೀಡಿದರು.

ಪಾಸ್‌ ನೀಡಲು ಸೂಚನೆ
ಎಂಡೋ ಪೀಡಿತ ಅಂಗವಿಕಲರಿಗೆ ಫಿಸಿಯೋಥೆರಪಿ ನೀಡಲು ಶಾಶ್ವತ ಪುರ್ನವಸತಿ ಕೇಂದ್ರವನ್ನು ತೆರೆಯಬೇಕು. ಗುರುತಿನ ಚೀಟಿ ಹಾಗೂ ಪಾಸ್‌ ತಪ್ಪದೇ ನೀಡಬೇಕು ಎಂದರು.

Advertisement

ಗೇರು ಮರಗಳಿಗೆ ಹಾನಿ
ಜಿಲ್ಲೆಯಲ್ಲಿ ಗೇರು ಬೀಜದ ಮರಗಳಿಗೆ ಹಾನಿ ಉಂಟು ಮಾಡುವ ಕೀಟಗಳ ನಿಯಂತ್ರಣಕ್ಕೆ ಕುಂದಾಪುರ ತಾಲೂಕಿನ 29, ಉಡುಪಿಯ 5 ಹಾಗೂ ಕಾರ್ಕಳದ 9 ಗ್ರಾಮಗಳು ಸೇರಿದಂತೆ 43 ಗ್ರಾಮಗಳಲ್ಲಿ ಎಂಡೋಸಲ್ಫಾನ್‌ ಸಿಂಪಡಿಸಿದ್ದು, ಇದು ಸುತ್ತಲಿನ ಇತರ ಗ್ರಾಮಗಳಿಗೂ ಬಾಧಿಸಿ ಒಟ್ಟು 86 ಗ್ರಾಮದ ಜನರಿಗೆ ತೊಂದರೆ ಉಂಟಾಗಿದೆ ಎಂದರು.

1,522 ಎಂಡೋ ಪೀಡಿತರು
ಜಿಲ್ಲೆಯಲ್ಲಿ 669 ಪುರುಷ, 620 ಮಹಿಳೆ, 353 ಮಕ್ಕಳ ಸಹಿತ ಒಟ್ಟು 1,642 ಎಂಡೋಸಲ್ಫಾನ್‌ ಪೀಡಿತರಿದ್ದು, ಅವರಲ್ಲಿ 120 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 1,522 ಮಂದಿ ಪೀಡಿತರಿದ್ದಾರೆ. ಅವರಲ್ಲಿ 203 ಜನರಿಗೆ ಶೇ. 25ರಷ್ಟು , 351 ಜನರಿಗೆ ಶೇ. 25ರಿಂದ 59ರಷ್ಟು ಹಾಗೂ 968 ಜನರಿಗೆ ಶೇ. 60ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿದ್ದಾರೆ ಎಂದರು.

ಫಿಸಿಯೋಥೆರಪಿ
ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ವೈ. ಮಾತನಾಡಿ, ಶಾಶ್ವತ ಪುರ್ನವಸತಿ ಕೇಂದ್ರ ತೆರೆಯುವವರೆಗೂ ಪೀಡಿತರಿಗೆ ಫಿಸಿಯೋಥೆರಪಿಯನ್ನು ಅಂಗವಿಕಲ ಇಲಾಖೆ ಮತ್ತು ಎನ್‌ಜಿಒಗಳ ಸಹಯೋಗ ದೊಂದಿಗೆ ನೀಡಬೇಕು. ಚಿಕಿತ್ಸೆಗಾಗಿ ಬರುವ ಎಂಡೋಸಲ್ಪಾನ್‌ ಪೀಡಿತರಿಗೆ ಔಷಧ ನೀಡಲು ಆದ್ಯತೆ ಮೇಲೆ ಖರೀದಿ ಮಾಡಿ ಉಚಿತವಾಗಿ ವಿತರಿಸಬೇಕು ಎಂದರು.

ಸವಲತ್ತು ಒದಗಿಸಿ
ಸಭೆಯಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿ, ವಿವಿಧ ಬೇಡಿಕೆಗಳನ್ನು ಸಮಿತಿಯ ಮುಂದೆ ತಂದರು. ಬಾಧಿತ ಪ್ರದೇಶದಲ್ಲಿ ಜನಿಸಿದ ಹೆಣ್ಣು ಮಕ್ಕಳು ಮದುವೆಯಾಗಿ ಇತರ ಪ್ರದೇಶಗಳಿಗೆ ಹೋಗಿದ್ದು, ಅವರಿಗೆ ಜನಿಸಿದ ಮಕ್ಕಳಿಗೂ ಎಂಡೋಸಲ್ಫಾನ್‌ ದುಷ್ಪರಿಣಾಮ ಬೀರಿದೆ. ಅವರಿಗೂ ಸವಲತ್ತುಗಳನ್ನು ಒದಗಿಸಬೇಕು ಎಂದರು.

ಕುಂದಾಪುರ ಎ.ಸಿ. ರಾಜು, ಡಿಎಚ್‌ಒ ಡಾ| ನಾಗಭೂಷಣ ಉಡುಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಡಾ| ಪ್ರಶಾಂತ್‌ ಭಟ್‌, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ತಾಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ
ವೆಬ್‌ಸೈಟ್‌
ಸರಕಾರದ ಸೌಲಭ್ಯ, ಆದೇಶಗಳ ಮತ್ತಿತರ ಕಾರ್ಯಕ್ರಮಗಳ ಕುರಿತ ಮಾಹಿತಿ ಗಳನ್ನು ಪೀಡಿತರಿಗೆ ತಲುಪಲು ಅನುಕೂಲವಾಗುವ ರೀತಿಯಲ್ಲಿ ಜಿಲ್ಲಾ ಮಟ್ಟದ ವೆಬ್‌ಸೈಟ್‌ ತೆರೆಯಬೇಕು. ಇದರಲ್ಲಿಯೇ ಅವರ ಕುಂದು-ಕೊರತೆ ಅರ್ಜಿಗಳನ್ನು ಸಲ್ಲಿಸಲು ಅನುವು ಮಾಡಿಕೊಟ್ಟು, ನಿಯಮಾನು ಸಾರವಾಗಿ ಸ್ಪಂದಿಸಬೇಕು ಎಂದು ಡಿ.ಸಿ. ಕೂರ್ಮಾ ರಾವ್‌ ಹೇಳಿದರು.

3 ತಿಂಗಳಿಗೊಮ್ಮೆ ಸಭೆ
ತಾಲೂಕು ಮಟ್ಟದಲ್ಲಿ ಸಂತ್ರಸ್ತರಿಗೆ ಸೌಲಭ್ಯ ನೀಡುವ, ಕುಂದುಕೊರತೆ ಗಳನ್ನು ಚರ್ಚಿಸುವ ಸಭೆಯನ್ನು ಪ್ರತೀ 3 ತಿಂಗಳಿಗೊಮ್ಮೆ ಕರೆಯಬೇಕು. ಸಾಧ್ಯ ವಾದಷ್ಟು ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಬೇಕೆಂದು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next