Advertisement

ಇಂದು ಫೋನ್‌ ಇನ್‌; ಲಾಕ್‌ಡೌನ್‌ ಕುರಿತಾದ ಪ್ರಶ್ನೆಗಳಿಗೆ ಉಭಯ ಜಿಲ್ಲಾಧಿಕಾರಿಗಳಿಂದ ಉತ್ತರ

01:14 AM Apr 21, 2020 | Sriram |

ಮಂಗಳೂರು/ಉಡುಪಿ: ಮಾರಕ ಕೋವಿಡ್‌ 19 ವೈರಸ್‌ ಹರಡುವುದನ್ನು ತಡೆಯಲು ದೇಶಾದ್ಯಂತ ಘೋಷಿಸಲಾಗಿರುವ ಲಾಕ್‌ಡೌನ್‌ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿಯೂ ಜಾರಿಯಲ್ಲಿದೆ. ಅದು ಈಗ ಮೇ 3ರ ವರೆಗೆ ವಿಸ್ತರಣೆಯೂ ಆಗಿದೆ. ಈ ಕುರಿತು ಓದುಗರು ಹೊಂದಿರುವ ಪ್ರಶ್ನೆ ಮತ್ತು ಸಂಶಯಗಳಿಗೆ ಉತ್ತರ ಒದಗಿಸುವ ಪ್ರಯತ್ನವನ್ನು “ಉದಯವಾಣಿ’ ಪತ್ರಿಕೆಯು ಉಭಯ ಜಿಲ್ಲಾಧಿಕಾರಿಗಳ ಫೋನ್‌ ಇನ್‌ ಮೂಲಕ ಮಾಡುತ್ತಿದೆ.

Advertisement

ಇಂದು (ಮಂಗಳವಾರ) ಬೆಳಗ್ಗೆ 9ರಿಂದ 10 ಗಂಟೆಯವರೆಗೆ ಫೋನ್‌ ಇನ್‌ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರು ಉತ್ತರ ನೀಡುವರು. ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ 0824 2441166 ಮತ್ತು 0824 2440259.

ಉಡುಪಿ ಜಿಲ್ಲಾ ವ್ಯಾಪ್ತಿಯ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಉತ್ತರ ನೀಡುವರು. ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ 0820 2205000.

Advertisement

Udayavani is now on Telegram. Click here to join our channel and stay updated with the latest news.

Next